ಜು.20: ಕಾಟಿಪಳ್ಳದಲ್ಲಿ ಎಸ್ಸೆಸ್ಸೆಫ್ ಸಕ್ರಿಯ ಕಾರ್ಯಕರ್ತರ ಸಂಗಮ

Update: 2018-07-19 11:15 GMT

ಮಂಗಳೂರು: ಎಸ್ಸೆಸ್ಸೆಫ್ ರಾಜ್ಯ ಸಮಿತಿ ವತಿಯಿಂದ ದ.ಕ ಜಿಲ್ಲೆ ವ್ಯಾಫ್ತಿಯ ಯುನಿಟ್ ಗಳಿಂದ ಆಯ್ದ ಸಕ್ರಿಯ ಕಾರ್ಯಕರ್ತರ ಸಂಗಮವು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಡಗು ರವರ ಅಧ್ಯಕ್ಷತೆಯಲ್ಲಿ ಜುಲೈ 20 ಶುಕ್ರವಾರ ಸಂಜೆ 6:00 ಗಂಟೆಗೆ ಕಾಟಿಪಳ್ಳದ ಜಾಸ್ಮಿನ್ ಹಾಲ್ ನಲ್ಲಿ ನಡೆಯಲಿರವುದು.

ಕಾರ್ಯಕ್ರಮದಲ್ಲಿ ಸಿ.ಎನ್ ಜಾಫರ್ ಕಾಸರಗೋಡ್, ರಾಜ್ಯ ಕಾರ್ಯದರ್ಶಿ ಸುಫಿಯಾನ್ ಸಖಾಫಿ ಕಾವಲ್ ಕಟ್ಟೆ, ಕೋಶಾಧಿಕಾರಿ ಶರೀಫ್ ಬೆಂಗಳೂರು ಹಾಗೂ ಇತರ ರಾಜ್ಯ ನಾಯಕರು ಭಾಗವಹಿಸಲಿದ್ದಾರೆ.

ಸಂಜೆ 4:00 ಗಂಟೆಗೆ ದ.ಕ ಜಿಲ್ಲೆ ವ್ಯಾಪ್ತಿಯ ಡಿವಿಷನ್ ಗಳಿಂದ ಆಯ್ಕೆಯಾದ ಟ್ರೈನರ್ಸ್ ಗಳಿಗೆ ತರಗತಿ ನಡೆಯಲಿದೆ ಎಂದು ಎಸ್ಸೆಸ್ಸೆಫ್ ರಾಜ್ಯ ಸಮಿತಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News