ಶ್ರೀನಿವಾಸ ರೆಡ್ಡಿಗೆ ಡಾಕ್ಟರೇಟ್
Update: 2018-07-19 19:24 IST
ಮೂಡಬಿದಿರೆ,ಜು.19: ಶ್ರೀನಿವಾಸ ರೆಡ್ಡಿಯವರು ಮಂಡಿಸಿದ ಫ್ರೌಡ ಪ್ರಬಂಧ ‘ಪ್ಯೂರಿಫೀಕೇಶನ್ ಆ್ಯಂಡ್ ಕೇರೆಕ್ಟರೈಸೇಶನ್ ಆಫ್ ನೇಟಿವ್ ಕೊಲೊನೈಸೇಶನ್ ಫ್ಯಾಕ್ಟರ್ಸ್ ಒಫ್ ಕ್ಲೀನಿಕ್ಕಲಿ ಐಸೋಲೇಟೆಡ್ ಎಂಟೆರೊಟೊಕ್ಸಿಜೆನಿಕ್ ಇಸ್ಚೆರಿಚಿಯ ಕೊಲಿ (ಇಟಿಇಸಿ)’ ಕ್ಕೆ ಕೊಯಂಬತ್ತೂರಿನ ಭಾರತೀಯಾರ್ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಇವರು ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ರಾಮಭಟ್ ಪಿ. ಅವರ ಮಾರ್ಗದರ್ಶನದಲ್ಲಿ ಈ ಪ್ರಬಂಧ ರಚಿಸಿದ್ದರು. ಪ್ರಸ್ತುತ ಡಾ. ರೆಡ್ಡಿಯವರು ಗುರ್ಗಾಂವ್ನ ಮ್ಯಾನ್ಕೈಂಡ್ ಸಂಶೋಧನಾ ಕೇಂದ್ರದಲ್ಲಿ ಹಿರಿಯ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೂಲತಃ ಬಳ್ಳಾರಿ ಮೂಲದವರು.