×
Ad

​ಮಟ್ಕಾ; ಓರ್ವನ ಬಂಧನ

Update: 2018-07-19 21:45 IST

ಮಂಗಳೂರು, ಜು.19: ನಗರದ ಉರ್ವಸ್ಟೋರ್ ಮೈದಾನದ ಬಳಿ ಮಟ್ಕಾ ಬರೆಯುತ್ತಿದ್ದ ಆರೋಪದ ಮೇಲೆ ಅಶೋಕನಗರ ನಿವಾಸಿ ರಾಜೇಶ್ ಶೆಟ್ಟಿ (49) ಎಂಬಾತನನನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ.

ಮಟ್ಕಾ ಬರೆಯುತ್ತಿದ್ದ ಎಂಬ ಖಚಿತ ಮಾಹಿತಿಯಂತೆ ಉರ್ವ ಪೊಲೀಸ್ ಠಾಣಾಧಿಕಾರಿ ಹಾಗೂ ಸಿಬ್ಬಂದಿ ದಾಳಿ ಮಾಡಿ, ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ ಮಟ್ಕಾ ಚೀಟಿ, ಮೊಬೈಲ್ ಪೋನ್, 1,740ರೂ. ನಗದು ಹಣ ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಮುಖ್ಯ ಆರೋಪಿ ಚಂದ್ರ ಎಂಬಾತ ತಲೆಮರೆಸಿಕೊಂಡಿದ್ದಾನೆ.

ಈ ಕುರಿತು ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News