ಮಂಗಳೂರು; ಅಗ್ನಿ ಆಕಸ್ಮಿಕ :ಕಾಲೇಜು ಮುಂಭಾಗ ನಿಲ್ಲಿಸಿದ್ದ ಬೈಕ್ ಉರಿದು ಭಸ್ಮ

Update: 2018-07-20 13:30 GMT

ಮಂಗಳೂರು, ಜು.20: ನಿಲ್ಲಿಸಿದ್ದ ಬೈಕೊಂದರಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡು ನೋಡನೋಡುತ್ತಿದ್ದಂತೆ ಕ್ಷಣ ಮಾತ್ರದಲ್ಲಿ ಉರಿದು ಭಸ್ಮವಾದ ಘಟನೆ ನಗರದ ಎಸ್‌ಡಿಎಂ ಕಾಲೇಜು ಮುಂಭಾಗದಲ್ಲಿ ನಡೆದಿದೆ.

ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿಯೋರ್ವ ತನ್ನ ಕೆಟಿಎಂ ಬೈಕನ್ನು ಕಾಲೇಜಿನ ಬಳಿ ನಿಲ್ಲಿಸಿ ತೆರಳಿದ್ದರು. ಕೆಲ ಹೊತ್ತಿನಲ್ಲಿ ಬೈಕಿನ ಪೆಟ್ರೋಲ್ ಟ್ಯಾಂಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣ ಮಾತ್ರದಲ್ಲಿ ಬೆಂಕಿ ಇಡೀ ಬೈಕನ್ನು ಆವರಿಸಿದ್ದು ಧಗ ಧಗನೆ ಉರಿದು ಭಸ್ಮವಾಗಿದೆ.

ಬಳಿಕ ಪರಿಶೀಲಿಸಿದಾಗ ಬೈಕಿನ ಸೈಲೆನ್ಸರ್ ಬಳಿ ಬಟ್ಟೆಯ ತುಂಡೊಂದು ಉರಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸೈಲೆನ್ಸರ್‌ನ ಬಿಸಿಗೆ ಬಟ್ಟೆಗೆ ಬೆಂಕಿ ಹತ್ತಿಕೊಂಡು ಉರಿದಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News