ಕಾಟಿಪಳ್ಳದಲ್ಲಿ ರಾಜ್ಯ ಎಸ್ಸೆಸ್ಸೆಫ್ ನಿಂದ ಸಕ್ರಿಯ ಕಾರ್ಯಕರ್ತರ ಸಂಗಮ

Update: 2018-07-21 14:57 GMT

ಮಂಗಳೂರು,ಜು.21: ಎಸ್ಸೆಸ್ಸೆಫ್ ರಾಜ್ಯ ಸಮಿತಿ ವತಿಯಿಂದ ದ.ಕ ಜಿಲ್ಲಾ  ವ್ಯಾಪ್ತಿಯ ಡಿವಿಷನ್ ಗಳ ಯುನಿಟ್ ಗಳಿಂದ ಆಯ್ದ ಸಕ್ರಿಯ ಕಾರ್ಯಕರ್ತರ ಸಂಗಮವು  ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಡಗುರವರ ಅಧ್ಯಕ್ಷತೆಯಲ್ಲಿ  ಜಾಸ್ಮಿಯ ಹಾಲ್ ಕಾಟಿಪಳ್ಳದಲ್ಲಿ ಇತ್ತೀಚೆಗೆ ನಡೆಯಿತು.

ಎಸ್ಸೆಸ್ಸೆಫ್  ದ.ಕ ಜಿಲ್ಲಾಧ್ಯಕ್ಷ ಕೆ.ಪಿ ಸಿರಾಜುದ್ದೀನ್ ಸಖಾಫಿ ಕನ್ಯಾನ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಬೂ ಸುಫಿಯಾನ್ ಮದನಿ ಕಾಟಿಪಳ್ಳ ಮುನ್ನುಡಿ ಭಾಷಣ ಮಾಡಿದರು.ಎಸ್ಸೆಸ್ಸೆಫ್  ರಾಜ್ಯ ಕಾರ್ಯದರ್ಶಿ ಸುಫಿಯಾನ್ ಸಖಾಫಿ ಕಾವಲ್ ಕಟ್ಟೆ ಹಾಗೂ ರಾಜ್ಯ ಕೋಶಾಧಿಕಾರಿ ಶರೀಫ್ ಬೆಂಗಳೂರು ತರಗತಿ ನಡೆಸಿದರು.

ಸಂಗಮದಲ್ಲಿ ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಡಗು ಆಯ್ದ ಸಕ್ರಿಯ ಕಾರ್ಯಕರ್ತರ ಟೀಮ್ ಗೆ ‘ಹಸನೈನ್’ ಎಂದು ನಾಮಕರಣ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ರಾಜ್ಯ ಸದಸ್ಯ ಇಸ್ಮಾಯಿಲ್ ಝೈನಿ ಕೊಡಗು, ಮುಸ್ತಫಾ ನಯೀಂ ಮೋಂಟುಗೋಳಿ, ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು, ಉಡುಪಿ ಜಿಲ್ಲಾಧ್ಯಕ್ಷ ಅಶ್ರಫ್ ಅಂಜದಿ ಉಡುಪಿ, ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಲಂದರ್ ಪದ್ಮುಂಜ, ಕಾರ್ಯದರ್ಶಿ ಶರೀಫ್ ನಂದಾವರ, ಸದಸ್ಯರುಗಳಾದ ರಶೀದ್ ಹಾಜಿ ವಗ್ಗ, ಮುನೀರ್ ಸಖಾಫಿ ಉಳ್ಳಾಲ, ಸಯ್ಯದ್ ಖುಬೈಬ್ ತಂಙಳ್, ರಫೀಕ್ ಸುರತ್ಕಲ್, ಇಕ್ಬಾಲ್ ಮಂಗಿಲಪದವು, ಸುರತ್ಕಲ್ ಡಿವಿಷನ್ ಅಧ್ಯಕ್ಷ ಆರಿಫ್ ಝುಹ್ರಿ ಮೊದಲಾದವರು ಉಪಸ್ಥಿತರಿದ್ದರು.

ಎಸ್ಸೆಸ್ಸೆಫ್ ರಾಜ್ಯ ಕ್ಯಾಂಪಸ್ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕೇರಿ ಸ್ವಾಗತಿಸಿ ವಂದಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News