ಎಸ್‌ಜೆಎಂ ನಾವುಂದ ರೇಂಜ್ ವಾರ್ಷಿಕ ಮಹಾಸಭೆ

Update: 2018-07-21 17:27 GMT

ಕುಂದಾಪುರ, ಜು.21: ಅಖಿಲ ಭಾರತ ಸುನ್ನೀ ಜಂಇಯ್ಯತುಲ್ ಮುಅಲ್ಲಿ ಮೀನ್(ಎಸ್‌ಜೆಎಂ) ನಾವುಂದ ರೇಂಜ್ ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ನಾವುಂದ ಬುಸ್ತಾನುಲ್ ಉಲೂಂ ಮದ್ರಸಾ ಹಾಲ್‌ನಲ್ಲಿ ಜರಗಿತು.

ವಿದ್ಯಾಭ್ಯಾಸ ಬೋರ್ಡ್ ಮುಫತ್ತಿಷ್ ಹಸನ್ ಸಖಾಫಿ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯನ್ನು ಸ್ಥಳೀಯ ಮುದರ್ರಿಸ್ ಹಾಜಿ ಇಕ್ರಾಮುಲ್ಲಾ ಕಾಮಿಲ್ ಸಖಾಫಿ ಉದ್ಘಾಟಿಸಿದರು. ಹೆಮ್ಮಾಡಿ ಖತೀಬ್ ಮಸೂದ್ ಅಹ್ಸನಿ ಕುರಾನ್ ಪಠಿಸಿದರು. ರೇಂಜ್ ಪ್ರಧಾನ ಕಾರ್ಯದರ್ಶಿ ಉಮರುಲ್ ಫಾರೂಕ್ ಸಖಾಫಿ ಬಡಾಕೆರೆ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು.

ನಾವುಂದ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ತೌಫೀಕ್ ಅಬ್ದುಲ್ಲಾ ಹಾಜಿ, ಎಸ್‌ಎಂಎ ನಾವುಂದ ರೀಜಿನಲ್ ಅಧ್ಯಕ್ಷ ಬಿ.ಎಸ್.ಮೊಯ್ದಿನ್ ಉಪಸ್ಥಿತರಿ ದ್ದರು. ಹಂಗಳೂರು ಮುಹಮ್ಮದ್ ಅಶ್ರಫ್ ಮುಸ್ಲಿಯಾರ್ ನೂತನ ಸಮಿತಿ ಯ ಆಯ್ಕೆ ಪ್ರಕ್ರಿಯೆ ನಡೆಸಿದರು.

ಅಧ್ಯಕ್ಷರಾಗಿ ಮುಸ್ತಫಾ ಸಅದಿ ಮಾವಿನಕಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ಶಾಫೀ ಸಖಾಫಿ ಆಕಲುಬೈಲು, ಕೋಶಾಧಿಕಾರಿಯಾಗಿ ಹಾಜಿ ಅಯ್ಯೂಬ್ ಮುಸ್ಲಿಯಾರ್ ಉಪ್ಪುಂದ, ಉಪ ಸಮಿತಿಗಳಾದ ಪರೀಕ್ಷಾ ವಿಭಾಗ ಅಧ್ಯಕ್ಷರಾಗಿ ಅಬ್ದುಲ್ ರಶೀದ್ ಮದನಿ ಚಾತನಕೆರೆ, ಕಾರ್ಯದರ್ಶಿಯಾಗಿ ಮುಹಮ್ಮದ್ ಹನೀಫ್ ಸಅದಿ ನಾವುಂದ, ಟ್ರೈನಿಂಗ್ ವಿಭಾಗ ಅಧ್ಯಕ್ಷರಾಗಿ ಅಬೂಬಕರ್ ಸಿದ್ದೀಕ್ ಸಖಾಫಿ ಚಾತನಕೆರೆ, ಕಾರ್ಯದರ್ಶಿಯಾಗಿ ಕೊಂಬಾಳಿ ಝುಹುರಿ ಕೋಯನಗರ, ಮಿಶನರಿ ವಿಭಾಗ ಅಧ್ಯಕ್ಷರಾಗಿ ಅಬ್ಬಾಸ್ ಮದನಿ ಮರವಂತೆ, ಕಾರ್ಯದರ್ಶಿಯಾಗಿ ಅಬ್ದುಲ್ ಜಬ್ಬಾರ್ ಸಖಾಫಿ ಗಂಗೊಳ್ಳಿ, ಕ್ಷೇಮನಿಧಿ ವಿಭಾಗ ಅಧ್ಯಕ್ಷರಾಗಿ ಉಮರುಲ್ ಫಾರೂಕ್ ಸಖಾಫಿ ಬಡಕೆರೆ, ಕಾರ್ಯ ದರ್ಶಿಯಾಗಿ ಅನ್ಸಾರ್ ಸಖಾಫಿ ಕೌಂಜೂರು, ಮ್ಯಾಗಝಿನ್ ವಿಭಾಗ ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ಮದನಿ ಮಾವಿನಕಟ್ಟೆ, ಕಾರ್ಯದರ್ಶಿಯಾಗಿ ಬದ್ರುದ್ದೀನ್ ಝುಹುರಿ ನಾವುಂದ, ಕಾರ್ಯಕಾರಿ ಸದಸ್ಯರಾಗಿ ಎಲ್ಲಾ ಮದ್ರಸ ಗಳ ಸದರ್ ಮುಅಲ್ಲಿಮ್ ಅವರನ್ನು ಆಯ್ಕೆ ಮಾಡಲಾಯಿತು.

ಕಾರ್ಯದರ್ಶಿ ಉಮರುಲ್ ಫಾರೂಖ್ ಸಖಾಫಿ ಬಡಾಕೆರೆ ಸ್ವಾಗತಿಸಿ ದರು. ಶಾಫೀ ಸಖಾಫಿ ಆಕಳಬೈಲು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News