ಮುಕ್ಕ ಸುನ್ನಿ ಬಾಲ ಸಂಘದ ಮಹಾಸಭೆ

Update: 2018-07-21 17:28 GMT

ಸುರತ್ಕಲ್, ಜು.21: ಮುಕ್ಕ ಅಂಜುಮಾನ್ ಸಿರಾಜುಲ್ ಇಸ್ಲಾಂ ಮದರಸ ಇದರ ಸುನ್ನಿ ಬಾಲ ಸಂಘದ ಮಹಾಸಭೆಯು ಇತ್ತೀಚೆಗೆ ಮದ್ರಸ ಹಾಲ್‌ನಲ್ಲಿ ಜರಗಿತು.

ಸ್ಥಳೀಯ ಖತೀಬ್ ವಿ.ಎ.ಮನ್ಸೂರು ಮದನಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಇಬ್ರಾಹಿಂ ಫಾಳಲಿ ಸಭೆಯನ್ನು ಉದ್ಘಾಟಿಸಿದರು. ಸಹ ಶಿಕ್ಷಕರಾದ ಅಬೂ ಬಕ್ಕರ್ ಮುಸ್ಲಿಯಾರ್, ಇಬ್ರಾಹಿಂ ಖಲೀಲ್ ಮುಸ್ಲಿಯಾರ್, ನೌಫಲ್ ಮದನಿ, ಹಬೀಬುರ್ರಹ್ಮಾನ್ ಮದನಿ ಉಪಸ್ಥಿತರಿದ್ದರು.
ಅಧ್ಯಕ್ಷರಾಗಿ ಹಫೀಳ್, ಉಪಾಧ್ಯಕ್ಷರಾಗಿ ಸಿನಾನ್, ಪ್ರಧಾನ ಕಾರ್ಯದರ್ಶಿ ಯಾಗಿ ಶಾಝಿಲ್, ಜೊತೆ ಕಾರ್ಯದರ್ಶಿಯಾಗಿ ಕಲಂದರ್, ಕೋಶಾಧಿಕಾರಿ ಯಾಗಿ ಫಾಳಿಲ್ ಹಾಗೂ 14 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರುಗಳನ್ನು ಆರಿಸಲಾಯಿತು.

2018-19ನೆ ಸಾಲಿನ ಪ್ರತಿಭಾ ಸಂಗಮಕ್ಕೆ ವಿದ್ಯಾರ್ಥಿಗಳಾದ ಸ್ವಲಾಹ್, ಫಲಾಹ್, ನಜಾಹ್, ಶಂಸ್, ಕಮರ್, ನುಜೂಂ ಅವರ ತಂಡವನ್ನು ಇದೇ ಸಂದರ್ಭದಲ್ಲಿ ರಚಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News