ಕುಡುಪು ಸಹಕಾರಿ ಸಂಘದ ಮಹಾಸಭೆ

Update: 2018-07-21 17:46 GMT

ಮಂಗಳೂರು, ಜು.21: ಕುಡುಪು ವಿವಿಧೊದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಕುಡುಪು ಅನಂತ ಪದ್ಮನಾಭ ದೇವಸ್ಥಾನದ ಸುಬ್ರಹ್ಮಣ್ಯ ಮಂದಿರದಲ್ಲಿ ಸಂಘದ ಅಧ್ಯಕ್ಷ ಜನಾರ್ದನ ಬಿ. ಅಧ್ಯಕ್ಷತೆಯಲ್ಲಿ ಜರಗಿತು.

2017-18ರ ಸಾಲಿನಲ್ಲಿ 60.58 ಲಕ್ಷ ರೂ. ಪಾಲು ಬಂಡವಾಳ ಹೊಂದಿದೆ. 16.95 ಕೋಟಿ ರೂ. ಠೇವಣಿ ಇದ್ದು, 11.33 ಕೋಟಿ ರೂ. ಸಾಲ ನೀಡಿದೆ. 2017-18ನೇ ಸಾಲಿನಲ್ಲಿ 53.06 ಲಕ್ಷ ರೂ. ಲಾಭ ಗಳಿಸಿದೆ ಎಂದು ಅಧ್ಯಕ್ಷರು ಸಭೆಗೆ ವಿವರಿಸಿದರು. 2017-18ನೇ ಸಾಲಿನ ಸಂಘದ ಸದಸ್ಯರಿಗೆ ಶೇ.20ರ ಡಿವಿಡೆಂಟ್ ಘೋಷಿಸಲಾಯಿತು.
ಸಂಘದ ಸ್ಥಾಪಕ ಸದಸ್ಯ ಕೆ. ನರಸಿಂಹ ತಂತ್ರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳನ್ನು ಪುರಸ್ಕರಿಸಿದರು. ಸಂಘದ ಉಪಾಧ್ಯಕ್ಷ ನಾಗರಾಜ ಭಟ್, ನಿರ್ದೇಶಕ ರಾಘವೇಂದ್ರ ಭಟ್, ರತ್ನಾಕರ ಬಾಯಾರ್, ಕೆ.ಕುಮಾರ, ಪ್ರಶಾಂತ ರಾವ್, ಕೆ.ಚಂದ್ರಹಾಸ, ಉಮೇಶ ಬಂಗೇರ, ಮುಕೇಶ್‌ಕುಮಾರ್ ಕವಿತಾ, ವೀಣಾಶಾಂತಪ್ಪ, ಮುಖ್ಯಕಾರ್ಯನಿರ್ವಹಣಾಧಿಕಾರಿ ಜತ್ತಪ್ಪಆಳ್ವ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News