ಸಂತ ಕಬೀರ್‌ದಾಸರ 500ನೇ ಪುಣ್ಯಸ್ಮೃತಿ

Update: 2018-07-21 17:50 GMT

ಮಂಗಳೂರು, ಜು.21: ಶಕ್ತಿನಗರದ ಶಕ್ತಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಸಂತ ಕಬೀರ್‌ದಾಸರ 500ನೇ ಪುಣ್ಯಸ್ಮತಿಯನ್ನು ಸಾಹಿತ್ಯ ಸಂಘದ ಆಶ್ರಯದಲ್ಲಿ ಆಚರಿಸಲಾಯಿತು.

ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದ ಸೈಂಟ್ ಆಗ್ನೇಸ್ ಪಿ.ಯು. ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ಪಿ.ವಿ. ಶೋಭಾ ಮಾತನಾಡಿ, ಸಂತ ಕಬೀರರು 500 ವರ್ಷಗಳ ಹಿಂದೆಯೇ ಕಪಟ ಭಕ್ತಿ, ಮೌಢ್ಯಗಳನ್ನು ಬಲವಾಗಿ ತನ್ನ ದ್ವಿಪದಿಗಳ ಮೂಲಕ ಖಂಡಿಸಿದರು. ಸಾಮಾಜಿಕ ಜಾಗೃತಿಯ ಕಹಳೆಯನ್ನೂದಿದರು ಎಂದು ಕಬೀರ್‌ದಾಸರ ಜೀವನ ಹಾಗೂ ಸಂದೇಶದ ಬಗ್ಗೆ ವಿವರಿಸಿದರು.

ಕಾಲೇಜಿನ ಪಾಚಾರ್ಯ ಪ್ರಭಾಕರ ಜಿ.ಎಸ್ ಕಾರ್ಯಕ್ರಮ ಉದ್ಘಾಟಿಸಿದರು. ಶಕ್ತಿ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಡಾ. ಮುರಳೀಧರ ನಾಕ್‌ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಪ್ರಾಚಾರ್ಯ ಮಧುಲಿಕ ಹಾಗೂ ಮಾರ್ಗದರ್ಶಕ ರಮೇಶ್.ಕೆ ಉಪಸ್ಥಿತರಿದ್ದರು.

ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್ಯ ಸ್ವಾಗತಿಸಿದರು. ರತ್ನಾವತಿ ಜೆ. ಬೈಕಾಡಿ ಪ್ರಾರ್ಥಿಸಿದರು. ಕಬೀರರ ದ್ವಿಪದಿಗಳನ್ನು ಹಾಡಿದರು. ಶಾಲಾ ಶಿಕ್ಷಕಿ ರಿಂಕು ಕಾರ್ಯಕ್ರಮ ನಿರೂಪಿಸಿದರು. ಪ್ರಿಯಾಂಕ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News