ಯುಪಿಸಿಎಲ್ ಸ್ಥಾವರಕ್ಕೆ ಕಲ್ಲಡ್ಕ ಪ್ರಭಾಕರ ಭಟ್ ನಿಯೋಗ ಭೇಟಿ

Update: 2018-07-22 13:39 GMT

ಉಡುಪಿ, ಜು. 22: ಎಲ್ಲೂರು ಅದಾನಿ ಒಡೆತನದ ಉಡುಪಿ ಪವರ್ ಸಂಸ್ಥೆಯ ಸ್ಥಾವರಕ್ಕೆ ಕಲ್ಲಡಕದ ಶ್ರೀರಾಮ ವಿದ್ಯಾ ಕೇಂದ್ರದ ಸ್ಥಾಪಕ ಕಾರ್ಯದರ್ಶಿ ಪ್ರಭಾಕರ ಭಟ್ ಕಲ್ಲಡ್ಕ, ಅಧ್ಯಕ್ಷ ನಾರಯಣ ಸೋಮಯಜಿ ಮತ್ತು ಸಂಚಾ ಲಕ ವಸಂತ ಮಾಧವ ಇಂದು ಭೇಟಿ ನೀಡಿದರು.

ಅದಾನಿ ಸಿಎಸ್‌ಆರ್ ಯೋಜನೆಯ ಉಡಾನ್ ಕಾರ್ಯಕ್ರಮದಡಿ ಶ್ರೀ ರಾಮ ಸೇವಾ ಕೇಂದ್ರದ ಪ್ರಭಾಕರ್ ಭಟ್ ಮತ್ತು ಆಡಳಿತ ಅಧಿಕಾರಿಗಳನ್ನು ಯುಪಿಸಿಎಲ್ ಸಂಸ್ಥೆ ಆಹ್ವಾನಿಸಿದ್ದು, ಸಂಸ್ಥೆಯ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ ಸ್ವಾಗತಿಸಿದರು. ನಿಯೋಗವನ್ನು ಸ್ಥಾವರದ ವಿವಿಧ ಘಟಕಗಳಿಗೆ ಕರೆದೊಯ್ದು ಆಯಾ ಘಟಕಗಳಲ್ಲಿ ಆಧುನಿಕ ತಂತ್ರಜ್ನಾನವನ್ನು ಅಳವಡಿಸಿರುವ ಬಗ್ಗೆ ಮತ್ತು ಅದರ ಕಾರ್ಯವೈಖರಿ ಬಗ್ಗೆ ಇಲಾಖಾ ಮುಖ್ಯಸ್ಥರಿಂದ ವಿವರಿಸಲಾಯಿತು. ಈ ಸಂದರ್ಭದಲ್ಲಿ ನಿಯೋಗದಿಂದ ಸ್ಥಾವರದ ವಠಾರದಲ್ಲಿ ಸಸಿಯನ್ನು ನೆಡಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News