ಮೊಂಟೆಪದವು: ನೀರಿನಲ್ಲಿ ಮುಳುಗಿ ಯುವಕ ಮೃತ್ಯು

Update: 2018-07-22 16:57 GMT

ಕೊಣಾಜೆ, ಜು. 22: ಕೊಣಾಜೆ ಠಾಣೆ ವ್ಯಾಪ್ತಿಯ ಮೊಂಟೆಪದವು ಬಳಿಯ ಗುದ್ರು ಎಂಬಲ್ಲಿ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ರವಿವಾರ ಸಂಜೆ ನಡೆದಿದೆ.

ಮೃತರನ್ನು ಉಳ್ಳಾಲ ಅಳೇಕಲದ ಖಲೀಲ್ (30) ಎಂದು ಗುರುತಿಸಲಾಗಿದೆ.

ಇಂದು ಸಂಜೆ ಉಳ್ಳಾಲ ಅಳೇಕಲದ ಐದು ಮಂದಿ ಯುವಕರ ತಂಡ ಮೊಂಟೆಪದವಿನ ಗುದ್ರುವಿನಲ್ಲಿರುವ ಈಜು ಕೊಳದಲ್ಲಿ ಆಟವಾಡುತಿದ್ದ ಸಂದರ್ಭ ಖಲೀಲ್ ನೀರಿನಲ್ಲಿ ಮುಳುಗಿದ್ದು ತಕ್ಷಣಕ್ಕೆ ಯಾರ ಅರಿವಿಗೂ ಬಂದಿರಲಿಲ್ಲ ಎನ್ನಲಾಗಿದೆ. ಸ್ವಲ್ಪ ಹೊತ್ತಿನಲ್ಲಿಯೇ ಖಲೀಲ್ ಅವರನ್ನು ಹುಡುಕುವ ಯತ್ನ ನಡೆದಿದ್ದು, ಸುಮಾರು ಅರ್ಧ ತಾಸಿನ ಬಳಿಕ ಖಲೀಲ್ ಅವರನ್ನು ಕೊಳದ ಆಳದಿಂದ ಹೊರತೆಗೆಯಲಾಗಿದ್ದು, ಈ ವೇಳೆ ಅವರು ಮೃತಪಟ್ಟಿದ್ದರು ಎಂದು ಜಮೀನಿನ ಸಂಬಂಧಿಕರು ಕೊಣಾಜೆ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News