ಉದ್ಯಮಿ, ಸಮಾಜ ಸೇವಕ ಸೆಮಿನಾ ನಾರಾಯಣ ಸಾಲ್ಯಾನ್ ನಿಧನ
Update: 2018-07-22 17:07 GMT
ಮೂಡುಬಿದಿರೆ, ಜು. 22: ಹಲವಾರು ಸೇವಾ ಸಂಸ್ಥೆ ಮತ್ತು ಸಮಾಜ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಶಿರ್ತಾಡಿ ಸಮೀಪದ ಬೋರುಗುಡ್ಡೆಯ ಉದ್ಯಮಿ ಸೆಮಿನಾ ನಾರಾಯಣ ಸಾಲ್ಯಾನ್ (45) ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ರವಿವಾರ ಬೆಳಗ್ಗೆ ನಿಧನರಾದರು.
ನೆಲ್ಲಿಕಾರು ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷರಾಗಿದ್ದ ನಾರಾಯಣ ಸಾಲ್ಯಾನ್ ಅವರು ಬೋರುಗುಡ್ಡೆಯಲ್ಲಿ ಶಾಮಿಯಾನದ ಅಂಗಡಿಯನ್ನು ಹೊಂದಿದ್ದು ಬಡವರಿಗೆ, ಅಸಕ್ತರಿಗೆ ತಮ್ಮಿಂದಾಗುವ ರೀತಿಯಲ್ಲಿ ಸಹಾಯವನ್ನು ಮಾಡುತ್ತಾ ಬಂದಿದ್ದು, ಎಲ್ಲರಿಗೂ ಆತ್ಮೀಯರಾಗಿದ್ದರು.
ಉಡುಪಿ ಜಿಲ್ಲಾ ಶಾಮಿಯಾನ ಮಾಲಕರ ಒಕ್ಕೂಟದ ಅಧ್ಯಕ್ಷ, ಶಿರ್ತಾಡಿ ಲಯನ್ಸ್ ಕ್ಲಬ್ನ ಮಾಜಿ ಅಧ್ಯಕ್ಷರಾಗಿದ್ದ ಅವರು ಮಂಗಳೂರು ರಾಮಕೃಷ್ಣ ಕಾಲೇಜಿನ ಎನ್ಎಸ್ಎಸ್ ಕ್ಯಾಂಪ್ಗಳನ್ನು ನಡೆಸುತ್ತಾ ಗಮನ ಸೆಳೆದಿದ್ದರು.
ಮೃತರು ಪತ್ನಿ, ಓರ್ವ ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.