ನೀರುಪಾಲಾದ ಯುವಕನ ಮೃತದೇಹ ಪತ್ತೆ

Update: 2018-07-23 17:31 GMT

ಕುಂದಾಪುರ, ಜು. 23: ಎರಡು ದಿನಗಳ ಹಿಂದೆ ನಾಡ ಗ್ರಾಮದ ಕಳುವಿನ ಬಾಗಿಲು ಎಂಬಲ್ಲಿ ಸೌಪರ್ಣಿಕಾ ಹೊಳೆಗೆ ಬಿದ್ದು ನಾಪತ್ತೆಯಾಗಿದ್ದ ಸ್ಥಳೀಯ ನಿವಾಸಿ ಸುಧೀಂದ್ರ ಕಾಂಚನ್(32) ಎಂಬವರ ಮೃತದೇಹ ಜು. 23ರಂದು 6.30ರ ಸುಮಾರಿಗೆ ಗಂಗೊಳ್ಳಿಯ ಲೈಟ್ ಹೌಸ್ ಬಳಿಯ ಕಡಲ ಕಿನಾರೆಯಲ್ಲಿ ಪತ್ತೆಯಾಗಿದೆ.

ಇವರು ಜು. 20ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ರಾಘವೇಂದ್ರ ಹಾಗೂ ರತ್ನಾಕರ ಅವರೊಂದಿಗೆ ಮನೆ ಸಮೀಪದ ಹೊಳೆಯಲ್ಲಿ ಗಾಳ ಹಾಕಿ ಮೀನು ಹಿಡಿಯುತ್ತಿದ್ದಾಗ ಆಕಸ್ಮಿಕವಾಗಿ ನೀರಿಗೆ ಬಿದ್ದಿದ್ದು, ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದರು. ಸ್ಥಳೀಯರ ಸಹಕಾರದಿಂದ ಇಂದು ಮೃತದೇಹ ಪತ್ತೆ ಯಾಗಿದೆ. ಬೆಂಗಳೂರಿನಲ್ಲಿ ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದ ಸುಧೀಂದ್ರ ವಾರದ ಹಿಂದಷ್ಟೇ ಊರಿಗೆ ಬಂದಿದ್ದರು.

ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News