ಗಾಂಜಾ ಸೇವನೆ: ಪ್ರತ್ಯೇಕ ಪ್ರಕರಣದಲ್ಲಿ ನಾಲ್ವರ ಬಂಧನ
Update: 2018-07-23 17:32 GMT
ಮಂಗಳೂರು, ಜು.23: ದಂಬೇಲ್ ನದಿ ಕಿನಾರೆ ಹಾಗೂ ಉರ್ವಸ್ಟೋರ್ ಬಳಿ ಗಾಂಜಾ ಸೇವನೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸೋಮವಾರ ಉರ್ವ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಅಶೋಕನಗರ ದಂಬೇಲ್ ನಿವಾಸಿ ನಿಶಿತ್(22), ಕೋಡಿಕಲ್ ನಿವಾಸಿ ವೈಶಾಕ್(18), ಶಕ್ತಿನಗರದ ಪ್ರೀತಂ ಆಚಾರ್ಯ(24), ಕದ್ರಿ ಟೋಲ್ಗೇಟ್ ಸಮೀಪದ ಸೂರಜ್ ಎಸ್.ಕುಮಾರ್(33) ಬಂಧಿತ ಆರೋಪಿಗಳು. ಈ ಕುರಿತು ಉರ್ವ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.