ಗೋವು 'ರಾಷ್ಟ್ರಮಾತೆ' ಎಂದು ಘೋಷಿಸುವವರೆಗೆ ಗುಂಪು ಹತ್ಯೆಗಳು ನಿಲ್ಲುವುದಿಲ್ಲ: ಬಿಜೆಪಿ ಶಾಸಕನ ವಿವಾದಾತ್ಮಕ ಹೇಳಿಕೆ

Update: 2018-07-24 13:31 GMT

ಹೈದರಾಬಾದ್, ಜು.24: ಗೋವನ್ನು 'ರಾಷ್ಟ್ರಮಾತೆ'ಯಾಗಿ ಘೋಷಿಸುವವರೆಗೆ ಗೋರಕ್ಷಣೆಯ ಹೆಸರಿನ ಗುಂಪು ಹತ್ಯೆಗಳು ನಿಲ್ಲುವುದಿಲ್ಲ ಎಂದು ತೆಲಂಗಾಣದ ಬಿಜೆಪಿ ಶಾಸಕ ರಾಜಾ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಈ ವಿಚಾರದಲ್ಲಿ ರಕ್ತಪಾತವನ್ನು ತಾನು ಬಯಸುವದಿಲ್ಲ. ಆದರೆ ಗೋಹತ್ಯೆ ನಿಲ್ಲಲೇಬೇಕು. ಗೋವನ್ನು 'ರಾಷ್ಟ್ರಮಾತೆ'ಯಾಗಿ ಘೋಷಿಸಬೇಕು ಎಂದು ರಾಜಾ ಸಿಂಗ್ ವಿಡಿಯೋವೊಂದರಲ್ಲಿ ಹೇಳಿರುವುದಾಗಿ ವರದಿಯಾಗಿದೆ.

ಈ ಬಗ್ಗೆ ಲೋಕಸಭೆಯಲ್ಲೂ ಧ್ವನಿಯೆತ್ತಬೇಕು ಎಂದು ಅವರು ಇತರ ಶಾಸಕರನ್ನೂ ಆಗ್ರಹಿಸಿದ್ದಾರೆ. "ಗೋವು ರಾಷ್ಟ್ರಮಾತೆ ಎಂದು ಘೋಷಣೆಯಾಗುವವರೆಗೆ ಗೋರಕ್ಷಣೆಗಾಗಿನ ಯುದ್ಧ ನಿಲ್ಲುವುದಿಲ್ಲ ಎಂದು ನನಗನಿಸುತ್ತದೆ. ಗೋರಕ್ಷಕರನ್ನು ಜೈಲಿಗೆ ಹಾಕಿದರೂ ಅವರಿಗೆ ಗುಂಡು ಹೊಡೆದರೂ ಇದು ನಿಲ್ಲುವುದಿಲ್ಲ" ಎಂದವರು ವಿಡಿಯೋದಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News