×
Ad

ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ

Update: 2018-07-25 23:15 IST

ಉಡುಪಿ, ಜು.25: ವೈಯಕ್ತಿಕ ಕಾರಣದಿಂದ ಮನನೊಂದ ಕೊರಂಗ್ರಪಾಡಿ ಗ್ರಾಮದ ಮಾರ್ಪಳ್ಳಿಯ ನಿವಾಸಿ ಹರೀಶ್(43) ಎಂಬವರು ಜು. 24ರಂದು ಸಂಜೆ 4:30ರ ಸುಮಾರಿಗೆ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರ: ಕೊಕ್ಕರ್ಣೆ ಸೂರಾಲುಜೆಡ್ಡು ನಿವಾಸಿ ರಾಜು ಮರಕಾಲ ಎಂಬವರ ಮಗ ಕೃಷ್ಣ ಮರಕಾಲ(31) ಎಂಬವರು ಜು.24ರಂದು ಸಂಜೆ ವೇಳೆ ಪತ್ನಿಯ ಮನೆಯಾದ ಕುಂಭಾಶಿ ಗ್ರಾಮದ ಕೊರವಾಡಿ ಎಂಬಲ್ಲಿ ಮನೆಯ ಹಾಲ್‌ನ ಮಾಡಿನ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News