ರಾಯಗಢದಲ್ಲಿ ಕಮರಿಗೆ ಉರುಳಿದ ಬಸ್ ಇದುವರೆಗೆ 30 ಮೃತದೇಹಗಳು ಪತ್ತೆ

Update: 2018-07-29 16:03 GMT

ರಾಯಗಢ, ಜು. 29: ರಾಯಗಢ ಜಿಲ್ಲೆಯ ಅಂಬೆನಾಲಿಯಲ್ಲಿ ಶನಿವಾರ ಬಸ್ಸೊಂದು 500 ಅಡಿ ಆಳದ ಕಣಿವೆಗೆ ಉರುಳಿ ಬಿದ್ದು 30 ಮಂದಿ ಮೃತಪಟ್ಟಿದ್ದು, ಇವರಲ್ಲಿ 30 ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಪರಿಹಾರ ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ನೆರವು ನೀಡುತ್ತಿದೆ.

 ನಜ್ಜುಗುಜ್ಜಾದ ಬಸ್‌ನ ಅಡಿಯಲ್ಲಿ ಮೃತದೇಹಗಳು ಸಿಲುಕಿಕೊಂಡಿವೆಯೋ ಎಂದು ನಾವು ಪರಿಶೀಲಿಸುತ್ತಿದ್ದೇವೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಡೆಪ್ಯುಟಿ ಕಮಾಂಡೆಂಟ್ ವೈರವನತಾನ್ ಹೇಳಿದ್ದಾರೆ. ಚಾಲಕನ ನಿರ್ಲಕ್ಷದಿಂದ ಬಸ್ ಕಮರಿಗೆ ಉರುಳಿದೆ. ಈ ದುರಂತದಲ್ಲಿ ಒಬ್ಬ ಪ್ರಯಾಣಿಕ ಮಾತ್ರ ಉಳಿದುಕೊಂಡಿದ್ದಾನೆ ಎಂದು ಸಚಿವ ರವೀಂದ್ರ ಚೌಹಾನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News