ಮಂಜೇಶ್ವರ : ಸಮುದ್ರ ಕಿನಾರೆಯಲ್ಲಿ ಯುವಕನ ಮೃತದೇಹ ಪತ್ತೆ

Update: 2018-08-01 14:54 GMT

ಮಂಜೇಶ್ವರ, ಆ. 1: ಮಂಜೇಶ್ವರ ಸಮೀಪದ ಕುಂಡುಕೊಳಕೆ ಸಮುದ್ರ ಕಿನಾರೆಯಲ್ಲಿ ಯುವಕನೋರ್ವನ ಮೃತದೇಹ ಪತ್ತೆಯಾಗಿದೆ.

ಗುರುತು ಪತ್ರದಲ್ಲಿ ಜಗದೀಶ್ ಕಂಕನಾಡಿ ಎಂದು ಹೆಸರು ನಮೂದಿಸಲಾಗಿದೆ. ಬುಧವಾರ ಮಧ್ಯಾಹ್ನ 3 ಘಂಟೆಯ ಸುಮಾರಿಗೆ ಮೃತದೇಹ ಸಮುದ್ರದ ದಡ ಸೇರಿದ್ದು, ಪ್ಯಾಂಟ್ ನ ಜೇಬಿನಲ್ಲಿ ಕೆಲವೊಂದು ಪತ್ರಗಳು ಹಾಗೂ ಫೋಟೊ ವೊಂದು ಪತ್ತೆಯಾಗಿದೆ.

ಘಟನೆ ತಿಳಿದು ಸ್ಥಳಕ್ಕಾಗಮಿಸಿದ ಮಂಜೇಶ್ವರ ಪೊಲೀಸರು ತನಿಖೆ ನಡೆಸುತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News