ಎಂ.ಸಿ.ಇಸ್ಮಾಯಿಲ್ ಕುದ್ರೋಳಿ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ

Update: 2018-08-04 17:21 GMT

ಮಂಗಳೂರು, ಆ.4: ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಪಕ್ಕಲಡ್ಕ ಸೆಂಟರ್ ಇದರ ವತಿಯಿಂದ ಮರ್ಹೂಂ ಎಂ.ಸಿ. ಇಸ್ಮಾಯೀಲ್ ಕುದ್ರೋಳಿ ಸ್ಮರಣಾರ್ಥ ಕೋರ್ಸುಗಳ ಪರಿಚಯ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಶನಿವಾರ ನಡೆಯಿತು. 

ಹ್ಯೂಮನ್ ವೆಲ್ಫೇರ್ ಟ್ರಸ್ಟ್ ಕೋಶಾಧಿಕಾರಿ ನೂರುಲ್ ಅಮೀನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ಬಹುಮಾನ ವಿತರಿಸಲಾಯಿತು. ಅನುಪಮ ಮಾಸಿಕದ ಉಪಸಂಪಾದಕಿ ಸಬೀಹಾ ಫಾತಿಮಾ, ಹ್ಯೂಮನ್ ವೆಲ್ಫೇರ್ ಟ್ರಸ್ಟ್‌ನ ಅಧ್ಯಕ್ಷ ಯೂಸುಫ್ ಪಕ್ಕಲಡ್ಕ ಮಾತನಾಡಿದರು.

ವೇದಿಕೆಯಲ್ಲಿ ಭಾರತ್ ಸೋಶಿಯಲ್ ಟ್ರಸ್ಟ್ನ ಟ್ರಸ್ಟಿ ಎಂ.ಸಿ. ಅಶ್ರಫ್, ಸ್ನೇಹ ಪಬ್ಲಿಕ್ ಸ್ಕೂಲ್‌ನ ಮುಖ್ಯ ಶಿಕ್ಷಕಿ ನಾಗರತ್ನ, ಪಕ್ಕಲಡ್ಕ ಜಮಾಅತೆ ಇಸ್ಲಾಮಿಯ ಸಂಚಾಲಕ ಮುಹಮ್ಮದ್ ಸಮೀರ್, ಪಕ್ಕಲಡ್ಕ ಇಸ್ಲಾಮಿಯಾ ಮದ್ರಸದ ಅಧ್ಯಕ್ಷ ಅಬ್ದುಲ್ ಸಲಾಮ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಚಾಲಕ ಅಶಿರುದ್ದೀನ್ ಆಲಿಯಾ ಸ್ವಾಗತಿಸಿದರು. ಶಿಕ್ಷಕಿ ಖನೀಝ್ ಫಾತಿಮಾ ಪ್ರಾಸ್ತಾವಿಸಿದರು. ಅಝಾದ್ ಕಿರಾಅತ್ ಪಠಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News