×
Ad

ಪಿತ್ರೋಡಿಯಲ್ಲಿ ಆಟಿಡೊಂಜಿ ನೆನಪು ಕಾರ್ಯಕ್ರಮ

Update: 2018-08-05 19:39 IST

ಉಡುಪಿ, ಆ.5: ಉದ್ಯಾವರ ಪಿತ್ರೋಡಿಯ ದತ್ತಾತ್ರೇಯ ಮಹಿಳಾ ಮಂಡಳಿ ವತಿಯಿಂದ ಆಟಿಡೊಂಚಿ ನೆನಪು ಕಾರ್ಯಕ್ರಮ ರವಿವಾರ ದತ್ತಾತ್ರೇಯ ಭಜನಾ ಮಂದಿರದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಮಣಿಪಾಲ ಕೆಎಂಸಿಯ ಸಮುದಾಯ ವೈದಕೀಯ ವಿಭಾಗದ ಲೀಲಾವತಿ, ಸಚಿನ್ ಕದಿಕೆ, ಗ್ರಾಮದ ಪ್ರಮುಖರಾದ ಯತಿರಾಜ್ ಹೆಗ್ಡೆ, ಜಗನಾಥ್ ಕಡೆಕಾರ್, ಮಂದಿರದ ಅಧ್ಯಕ್ಷ ವೈನತೇಯ ಮೈಂದನ್, ಮಹಿಳಾ ಮಂಡಳಿಯ ಅಧ್ಯಕ್ಷೆ ಜಲಜಾಕ್ಷಿ ಸುವರ್ಣ ಉಪಸ್ಥಿತರಿದ್ದರು.

ಮಂಡಳಿಯ ಕಾರ್ಯದರ್ಶಿ ಹರಿಣಾಕ್ಷಿ ಕಾರ್ಯಕ್ರಮ ನಿರೂಪಿಸಿ ವಂದಿಸಿ ದರು. ಮಂದಿರದ ಸದಸ್ಯೆಯರು ತಮ್ಮ ತಮ್ಮ ಮನೆಯಲ್ಲಿ ಆಟಿಯ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಿ ತಂದು ಉಪಸ್ಥಿತರಿದ್ದ ಎಲ್ಲರಿಗೂ ಉಣ ಬಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News