ಕುಂದಾಪುರದಲ್ಲಿ ಆರ್ಟಿಒ ಕಚೇರಿ ಆರಂಭಕ್ಕೆ ಪ್ರಯತ್ನ: ಸಚಿವ ತಮ್ಮಣ್ಣ
Update: 2018-08-10 18:11 IST
ಉಡುಪಿ, ಆ.10: ಉಡುಪಿ ಜಿಲ್ಲೆಗೆ ಸಂಬಂಧಿಸಿ ಪ್ರಾದೇಶಿಕ ಸಾರಿಗೆ ಕಚೇರಿಯು ಮಣಿಪಾಲದಲ್ಲಿದ್ದು, ಕುಂದಾಪುರದಲ್ಲಿ ಆರ್ಟಿಒ ಕಚೇರಿ ಸ್ಥಾಪಿಸ ಬೇಕೆಂಬ ಬಹಳ ವರ್ಷಗಳ ಬೇಡಿಕೆ ನನ್ನ ಗಮನಕ್ಕೆ ಬಂದಿದೆ. ಮುಂದಿನ ಆರು ತಿಂಗಳೊಳಗೆ ಕುಂದಾಪುರದಲ್ಲಿ ಆರ್ಟಿಒ ಕಚೇರಿ ಆರಂಭಿಸಲು ಪ್ರಯತ್ನಿಸ ಲಾಗುವುದು ಎಂದು ರಾಜ್ಯ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದ್ದಾರೆ.
ಉಡುಪಿ ಜೆಡಿಎಸ್ ಕಚೇರಿಯಲ್ಲಿ ಶುಕ್ರವಾರ ಕುಂದಾಪುರ ಜೆಡಿಎಸ್ ವತಿಯಿಂದ ಕುಂದಾಪುರದಲ್ಲಿ ಆರ್ಟಿಒ ಕಚೇರಿ ಬೇಡಿಕೆ ಕುರಿತು ಸಲ್ಲಿಸಲಾದ ಮನವಿಯನ್ನು ಸ್ವೀಕರಿಸಿ ಅವರು ಈ ರೀತಿ ಪ್ರತಿಕ್ರಿಯಿಸಿದರು.
ಜೆಡಿಎಸ್ ಕಾರ್ಯಾಧ್ಯಕ್ಷ ಹುಸೇನ್ ಹೈಕಾಡಿ ಸಚಿವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.