×
Ad

ಎಪಿಎಂಸಿ ಅಧ್ಯಕ್ಷರಿಗೆ ಬೆದರಿಕೆ ಕರೆ: ದೂರು

Update: 2018-08-11 21:12 IST

ಅಜೆಕಾರು, ಆ.11: ಕಾರ್ಕಳ ಕೃಷಿ ಉತ್ಪನ್ನ ಮಾರುಕಟ್ಟೆ ಮಂಡಳಿಯ ಅಧ್ಯಕ್ಷ ಮುಟ್ಲುಪಾಡಿ ಸತೀಶ ಶೆಟ್ಟಿ(49) ಎಂಬವರಿಗೆ ಬೆದರಿಕೆ ಕರೆಗಳು ಬಂದಿರುವ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸತೀಶ್ ಶೆಟ್ಟಿ ಮನೆಯಲ್ಲಿರುವಾಗ ಅವರ ಮೊಬೈಲಿಗೆ ಜು.11ರಿಂದ ಆ.11 ರವರೆಗೆ ಹಲವಾರು ಬಾರಿ ಅಪರಿಚಿತ ವ್ಯಕ್ತಿಯು ಕರೆ ಮಾಡಿ ಎಪಿಎಂಸಿ ಅಧ್ಯಕ್ಷ ಸ್ಥಾನವನ್ನು ಬಿಡಬೇಕು, ಸಾಮಾಜಿಕ ಚಟುವಟಿಕೆಯಿಂದ ದೂರ ಇರಬೇಕು, ಇಲ್ಲದಿದ್ದರೆ ಕೈಕಾಲು ಮುರಿಯುತ್ತೇನೆ ಎಂಬುದಾಗಿ ಅವಾಚ್ಯ ಶಬ್ದದಿಂದ ಬೈದು ಬೆದರಿಕೆಯೊಡ್ಡಿದ್ದಾರೆಂದು ದೂರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News