ಮಂಗಳೂರು: ಸ್ಕೂಟರ್‌ಗೆ ಬಸ್ ಢಿಕ್ಕಿ; ಬಾಲಕಿ ಮೃತ್ಯು

Update: 2018-08-12 15:36 GMT

ಮಂಗಳೂರು, ಆ.12: ನಂತೂರಿನಲ್ಲಿ ಮಹಿಳೆಯೊಬ್ಬರು ಚಲಾಯಿಸುತ್ತಿದ್ದ ಸ್ಕೂಟರ್‌ಗೆ ಖಾಸಗಿ ಎಕ್ಸ್‌ಪ್ರೆಸ್ ಬಸ್ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಅವರ ಪುತ್ರಿ ಸಾವನ್ನಪ್ಪಿದ್ದು, ಆಕೆ ಮತ್ತು ಓರ್ವ ಪುತ್ರ ಗಾಯಗೊಂಡಿರುವ ಘಟನೆ ರವಿವಾರ ನಡೆದಿದೆ.

ಮೂಲತಃ ಶಿವಮೊಗ್ಗ ನಿವಾಸಿಯಾಗಿದ್ದು, ಪ್ರಸ್ತುತ ಸುರತ್ಕಲ್ ಸಮೀಪದ ಕಾಟಿಪಳ್ಳ ಕೃಷ್ಣಾಪುರ 4ನೇ ಕ್ರಾಸ್‌ನಲ್ಲಿ ವಾಸವಾಗಿರುವ ರೋಶನ್- ನೂರ್ ಜಹಾನ್ ದಂಪತಿಯ ಪುತ್ರಿ ಮಧಿಹಾ (11) ಮೃತ ಬಾಲಕಿ.

ನೂರ್‌ಜಹಾನ್ ಮತ್ತು ಆಕೆಯ 4 ವರ್ಷದ ಪುತ್ರ ಗಾಯಗೊಂಡಿದ್ದಾರೆ. ರೋಶನ್ ಅವರು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಅವರ ಹಿರಿಯ ಪುತ್ರಿ ಕೂಡ ಬೆಂಗಳೂರಿನಲ್ಲಿ ಓದುತ್ತಿದ್ದಾಳೆ. ಪತ್ನಿ ನೂರ್ ಜಹಾನ್ ಅವರು ಓರ್ವ ಪುತ್ರಿ ಮತ್ತು ಓರ್ವ ಪುತ್ರನ ಜತೆ ಕೃಷ್ಣಾಪುರದಲ್ಲಿ ವಾಸವಾಗಿದ್ದಾರೆ. ಸುಮಾರು ಒಂದು ತಿಂಗಳ ಹಿಂದೆಯಷ್ಟೇ ಈ ಕುಟುಂಬ ಶಿವಮೊಗ್ಗದಿಂದ ಸುರತ್ಕಲ್‌ಗೆ ಬಂದು ಬಾಡಿಗೆ ಮನೆಯಲ್ಲಿ ವಾಸ್ತವ್ಯ ಮಾಡಲು ಆರಂಭಿಸಿತ್ತು. 

ಈ ಬಗ್ಗೆ ಟ್ರಾಫಿಕ್ ಪೂರ್ವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News