ಪೆರ್ಣಂಕಿಲ: ಸುಂಟರಗಾಳಿಯಿಂದ 50ಕ್ಕೂ ಹೆಚ್ಚು ಮನೆಗೆ ಹಾನಿ, ಲಕ್ಷಾಂತರ ರೂ., ನಷ್ಟ

Update: 2018-08-13 17:11 GMT

ಉಡುಪಿ, ಆ. 13: ಕಾಪು ತಾಲೂಕಿನ ಪೆರ್ಣಂಕಿಲ ಗ್ರಾಮದ ಜಡ್ಡು, ಜನತಾನಗರ, ವರ್ವಾಡಿ ಪರಿಸರದಲ್ಲಿ ಮಧ್ಯಾಹ್ನ 2.45ಕ್ಕೆ ಭಾರೀ ಸುಂಟರಗಾಳಿಯಿಂದ 50ಕ್ಕೂ ಹೆಚ್ಚು ಮನೆಗಳ ಮಾಡು, ಹಂಚು, ತಗಡು ಶೀಟುಗಳಿಗೆ ಹಾನಿಯಾಗಿದೆ.

ಹಲಸು, ಮಾವು ನೂರಾರು ಮರಗಳು, ಹತ್ತರು ತಂತಿ ಕಂಬಗಳು ಉರುಳಿವೆ. ಯಾರಿಗೂ ಯಾವುದೇ ಗಾಯ ನೋವುಗಳಾದ ಬಗ್ಗೆ ವರದಿಯಾಗಿಲ್ಲ.    ಪೆರ್ಣಂಕಿಲ ಗ್ರಾಮ ಕರಣಿಕ ಸುನಿಲ್, ಕಾಪು ಶಾಸಕ ಲಾಲಾಜಿ ಮೆಂಡನ್,  ಪಂಚಾಯತ್ ಸದಸ್ಯರಾದ ಸದಾನಂದ ಪ್ರಭು, ರಶ್ಮಿ ನಾಯಕ್, ಮೋನಿಕಾ ನೊರೊನ್ಹಾ ಭೇಟಿ  ನೀಡಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News