ಉಡುಪಿ: ವಕ್ಫ್ ಮಾಹಿತಿ ಕೇಂದ್ರದಲ್ಲಿ ಸ್ವಾತಂತ್ರೋತ್ಸವ

Update: 2018-08-15 14:31 GMT

ಉಡುಪಿ, ಆ.15: ಉಡುಪಿ ನಾಯರ್‌ಕೆರೆಯಲ್ಲಿರುವ ವಕ್ಫ್ ಮಾಹಿತಿ ಕೇಂದ್ರದಲ್ಲಿ ಸ್ವಾತಂತ್ರೊೀತ್ಸವನ್ನು ಇಂದು ಆಚರಿಸಲಾಯಿತು.

ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ, ಎನ್‌ಸಿಸಿ ಅಧಿಕಾರಿ ಬಿ.ರತ್ನಾಕರ ಶೆಟ್ಟಿ ಧ್ವಜಾ ರೋಹಣಗೈದರು. ಮುಖ್ಯ ಅತಿಥಿಗಳಾಗಿ ನಾಯರ್‌ಕೆರೆ ಹಾಶಿಮಿ ಮಸೀದಿ ಅಧ್ಯಕ್ಷ ಝಕರಿಯಾ ಅಸ್ಸಾದಿ, ಸಮಾಜ ಸೇವಕ ಇಕ್ಬಾಲ್ ಮನ್ನಾ ಭಾಗವಹಿಸಿದ್ದರು.

ಮಾಹಿತಿ ಕೇಂದ್ರದ ಉಸ್ತುವಾರಿ ಮುಹಮ್ಮದ್ ಮರಕಡ ಹಾಗೂ ಮಸೀದಿಯ ಕಾರ್ಯಕಾರಿ ಸದಸ್ಯರು, ಪರಿಸರದ ಗಣ್ಯರು, ಆಸುಪಾಸಿನ ನಿವಾಸಿಗಳು ಹಾಗೂ ಮಕ್ಕಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News