ಶಿಷ್ಟಾಚಾರ ಬದಿಗಿರಿಸಿ ಮಕ್ಕಳನ್ನು ಭೇಟಿಯಾದ ಪ್ರಧಾನಿ

Update: 2018-08-15 14:43 GMT

ಹೊಸದಿಲ್ಲಿ, ಆ.15: ಕೆಂಪುಕೋಟೆಯಲ್ಲಿ ಸ್ವಾತಂತ್ರೋತ್ಸವದ ಭಾಷಣ ಮುಗಿಸಿ ಭದ್ರತಾ ಸಿಬ್ಬಂದಿಗಳ ಭದ್ರಕೋಟೆಯಲ್ಲಿ ತಮ್ಮ ವಾಹನದತ್ತ ಸಾಗುತ್ತಿದ್ದ ಪ್ರಧಾನಿ ನರೇಂದ್ರ ಮೋದಿ, ಅಲ್ಲೇ ಪಕ್ಕದಲ್ಲಿ ನಿಂತು ತಮ್ಮತ್ತ ಕೈಬೀಸುತ್ತಿದ್ದ ಮಕ್ಕಳನ್ನು ಕಂಡು, ಭದ್ರತಾ ವಲಯದಿಂದ ಹೊರಬಂದು ಮಕ್ಕಳನ್ನು ಭೇಟಿಯಾದ ಘಟನೆ ನಡೆಯಿತು.

ರಾಷ್ಟ್ರಧ್ವಜದ ಬಣ್ಣದ ದಿರಿಸಿನಲ್ಲಿ ಮಿಂಚುತ್ತಿದ್ದ ಮಕ್ಕಳು ತಮ್ಮೆಡೆ ಬರುತ್ತಿದ್ದ ಪ್ರಧಾನಿಯವರನ್ನು ಕಂಡು ಹರ್ಷೋದ್ಘಾರ ಮಾಡಿದರು. ಅವರಲ್ಲಿ ಕೆಲವರಿಗೆ ಪ್ರಧಾನಿ ಹಸ್ತಲಾಘವವನ್ನೂ ನೀಡಿದರು. ನನಗೆ ಹಸ್ತಲಾಘವ ನೀಡಿದ ಪ್ರಧಾನಿಯವರು ಒಳ್ಳೆಯ ಶಿಕ್ಷಣ ಪಡೆಯುವಂತೆ ಆಶೀರ್ವದಿಸಿದರು. ಅಲ್ಲದೆ ‘ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್’ ಎಂಬ ಆದರ್ಶ ವಾಕ್ಯವನ್ನು ಪಾಲಿಸುವಂತೆ ಕಿವಿಮಾತು ಹೇಳಿದರು ಎಂದು ಸರಕಾರಿ ಅನುದಾನಿತ ಸರ್ವೋದಯ ವಿದ್ಯಾಲಯದ 7ನೇ ತರಗತಿ ವಿದ್ಯಾರ್ಥಿನಿ ಶಿವಾನಿ ಪಾಲ್ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಈ ವೇಳೆ ಬೃಹತ್ ಸಂಖ್ಯೆಯಲ್ಲಿ ಮಕ್ಕಳು ಪ್ರಧಾನಿ ಮೋದಿಯವರನ್ನು ಸುತ್ತುವರಿದಾಗ ಎಚ್ಚರ ವಹಿಸಿದ ಭದ್ರತಾ ಸಿಬ್ಬಂದಿ ಪ್ರಧಾನಿಯವರನ್ನು ವಾಹನದತ್ತ ಕರೆತಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News