ಮಂಗಳೂರು-ಬೆಂಗಳೂರು ಮಾರ್ಗದ ವೊಲ್ವೊ, ರಾಜಹಂಸ ಬಸ್ ರದ್ದು
Update: 2018-08-15 16:33 GMT
ಮಂಗಳೂರು, ಆ.15: ಮಂಗಳೂರಿನಿಂದ ಬೆಂಗಳೂರಿಗೆ ಕೆಎಸ್ಸಾರ್ಟಿಸಿ ಎಲ್ಲ ರೀತಿಯ ವೊಲ್ವೊ, ರಾಜಹಂಸ ಬಸ್ ಸಂಚಾರ ನಿಲ್ಲಿಸಲಾಗಿದೆ ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು ತಿಳಿದಿದ್ದಾರೆ.
ಕರ್ನಾಟಕ ಸಾರಿಗೆ ಬಸ್ (ಕೆಂಪು ಬಸ್)ಗಳು ಮಾತ್ರ ಚಾರ್ಮಾಡಿ ಮಾರ್ಗದಲ್ಲಿ ಬೆಂಗಳೂರಿಗೆ ಸಂಚರಿಸುತ್ತಿವೆ. ಈಗಾಗಲೇ ವೊಲ್ವೊ ಟಿಕೆಟ್ ಬುಕ್ ಮಾಡಿದವರಿಗೆ ಶೇ.100ರಷ್ಟು ರೀಫಂಡ್ ಮಾಡಲಾಗುವುದು ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು ಪ್ರಕಟನೆಯಲ್ಲಿ ತಿಳಿದಿದ್ದಾರೆ.