ಗಾಂಜಾ ಸೇವನೆ: ಐವರು ಪೊಲೀಸ್ ವಶಕ್ಕೆ
Update: 2018-08-15 17:03 GMT
ಉಡುಪಿ, ಆ.15: ನಿಷೇಧಿತ ಗಾಂಜಾ ಮಾದಕ ವಸ್ತುವನ್ನು ಸೇವಿಸಿದ್ದ ಐವರನ್ನು ಪೊಲೀಸರು ಉಡುಪಿ ಹಾಗೂ ಮಣಿಪಾಲದಲ್ಲಿ ವಶಕ್ಕೆ ತೆಗೆದು ಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆ.14ರಂದು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು 76 ಬಡಗಬೆಟ್ಟು ಗ್ರಾಮದ ಫಿಶ್ ಮಾರ್ಕೆಟ್ ಬಳಿ ಗಾಂಜಾ ಸೇವನೆ ಮಾಡಿದ್ದ ಸ್ಥಳೀಯ ನಿವಾಸಿ ಗುರುಪಾದ ಹೆಗ್ಡೆ(23) ಎಂಬಾತ್ನು ವಶಕ್ಕೆ ಪಡೆದು ಕೊಂಡಿದ್ದಾರೆ.
ಆ.12ರಂದು ಮಣಿಪಾಲ ಪೊಲೀಸರು ವಿದ್ಯಾರತ್ನ ನಗರ ವಿದ್ಯಾರತ್ನ ಎನ್ ಕ್ಲೇವ್ ಕಟ್ಟಡದ ಸಮೀಪ ರಾಹುಲ್ ಬಿಜು(19), ಅಜಯ್ ಯು.(19), ಆಶಿಶ್ ಆಕ್ಷೆ(20), ಸಾಯಿ ಆಕಾಶ್(21) ಎಂಬವರನ್ನು ವಶಕ್ಕೆ ಪಡೆದು ಮಣಿಪಾಲ ಕೆಎಂಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ಮುಂದೆ ಹಾಜರು ಪಡಿಸಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ಆರೋಪಿಗಳು ಗಾಂಜಾ ಸೇವಿಸಿರುವ ಬಗ್ಗೆ ದೃಢ ಪತ್ರ ನೀಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.