ಕೇರಳ‌ ಪ್ರವಾಹ ಸಂತ್ರಸ್ತರಿಗೆ ನೆರವು : ಜುಮಾ ನಮಾಝ್ ನಂತರ ಧನ ಸಂಗ್ರಹಕ್ಕೆ ಸುನ್ನೀ ನಾಯಕರ ಮನವಿ

Update: 2018-08-16 14:44 GMT

ಮಂಗಳೂರು,ಆ.16 :ಸತತವಾಗಿ ಸುರಿಯುತ್ತಿರುವ ಮಳೆ ಹಾಗೂ ಭೂಕುಸಿತಕ್ಕೆ ಸಿಲುಕಿ ಸಂಕಷ್ಟದಲ್ಲಿರುವ ಕೇರಳದ ಜನತೆಗೆ ನೆರವಾಗಲು  ಕೇರಳ ಮುಸ್ಲಿಂ ಜಮಾಅತ್  ಅಧ್ಯಕ್ಷರಾದ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಸಹಾಯನಿಧಿಯನ್ನು ಘೋಷಿಸಿದ್ದಾರೆ.

ಆದ್ದರಿಂದ ಸಹಾಯ ಮಾಡಲು ಇಚ್ಚಿಸುವವರು ನಾಳೆ (ಆಗಸ್ಟ್ 17 ಶುಕ್ರವಾರ) ಜುಮಾ ನಮಾಝ್ ನಂತರ ಎಲ್ಲಾ ಮಸ್ಜಿದ್ ಗಳಲ್ಲಿ ಧನ ಸಂಗ್ರಹ ನಡೆಸಿ ಸುನ್ನೀ ಕೋ ಆರ್ಡಿನೇಶನ್ ಸಮಿತಿಗೆ ತಲುಪಿಸಬೇಕೆಂದು ರಾಜ್ಯ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಖಾಝಿ ಪಿ.ಎಂ.ಇಬ್ರಾಹಿಂ ಮುಸ್ಲಿಯಾರ್ ಬೇಕಲ್, ಕೋ ಆರ್ಡಿನೇಶನ್ ಸಮಿತಿ ಅಧ್ಯಕ್ಷ  ಪಿ. ಎಂ.ಅಬ್ಬಾಸ್ ಮುಸ್ಲಿಯಾರ್ ಮಂಜನಾಡಿ, ಎಸ್.ವೈ.ಎಸ್. ರಾಜ್ಯಾಧ್ಯಕ್ಷ ಜಿ.ಎಂ.ಕಾಮಿಲ್ ಸಖಾಫಿ , ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ಎಸ್.ಇ.ಡಿ.ಸಿ.ಅಧ್ಯಕ್ಷ ಕೆಕೆಎಂ ಕಾಮಿಲ್ ಸಖಾಫಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News