ಕೇರಳಕ್ಕೆ ನೆರವಾಗಿ : ಖಾಝಿ ತ್ವಾಖಾ ಮುಸ್ಲಿಯಾರ್ ಕರೆ
Update: 2018-08-16 14:48 GMT
ಮಂಗಳೂರು , ಆ. 16 : ಭೀಕರ ಪ್ರವಾಹಕ್ಕೆ ತುತ್ತಾಗಿ ಮನೆಮಾರು ಕಳೆದುಕೊಂಡು ನಿರ್ವಸಿತರಾಗಿರುವ ಕೇರಳದ ಜನತೆಗೆ ನೆರವಾಗಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಲ ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರು ಕರೆ ನೀಡಿದ್ದಾರೆ.
ಶುಕ್ರವಾರ ಜುಮಾ ನಮಾಝ್ ಬಳಿಕ ಜಿಲ್ಲೆಯ ಎಲ್ಲ ಮಸೀದಿಗಳಲ್ಲಿ ಕೇರಳದ ಜನತೆಗೆ ನೆರವಾಗಲು ಹಣ ಸಂಗ್ರಹಿಸಿ ಕೇರಳಕ್ಕೆ ತಲುಪಿಸಬೇಕು ಎಂದು ಮಸೀದಿ ಜಮಾತ್ ಗಳಿಗೆ ಅವರು ಕರೆ ನೀಡಿದ್ದಾರೆ.