ಚಾರ್ಮಾಡಿ ಘಾಟಿಯ ಹಲವು ತಿರುವುಗಳಲ್ಲಿ ಭೂ ಕುಸಿತ

Update: 2018-08-16 15:40 GMT

ಬೆಳ್ತಂಗಡಿ,ಆ.16: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಇತರೆ ಘಾಟಿ ರಸ್ತೆಗಳು ಬಂದ್ ಆಗಿದ್ದು  ಚಾರ್ಮಾಡಿ ಘಾಟಿಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಚಾಮಾಡಿ ಘಾಟಿಯಲ್ಲಿ ಅಲ್ಲಲ್ಲಿ ಕುಸಿತಗಳು ಕಾಣಿಸಿಕೊಂಡಿದ್ದು ಅಪಾಯಕಾರಿ ಸ್ಥಿತಿಯಿದೆ. 

ಘಾಟಿಯ ಹಲವು ತಿರುವುಗಳಲ್ಲಿ ಭೂ ಕುಸಿತ ಕಾಣಿಸಿದೆ. ಇದೀಗ ಘನ ವಾಹನಗಳು ಇದೇ ರಸ್ತೆಯ ಮೂಲಕ ಸಂಚರಿಸುತ್ತಿದ್ದು ಇದು ಅಪಾಯಕ್ಕೆ ಕಾರಣವಾಗಿದೆ. ರಸ್ತೆಯ ಕೆಳ ಭಾಗದಲ್ಲಿ ಕುಸಿತಗಳು ಕಾಣಿಸಿಕೊಂಡಿದ್ದು ಮಳೆ ಮುಂದುವರಿದರೆ ಅಪಾಯ ಸಂಭವಿಸುವ ಆತಂಕವಿದೆ.    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News