×
Ad

ನೆರೆ ಆವರಿಸಿದ ಪಾವೂರು ಉಳಿಯ ಪ್ರದೇಶಕ್ಕೆ ತಾಪಂ ಅಧ್ಯಕ್ಷ ಭೇಟಿ

Update: 2018-08-16 21:47 IST

ಮಂಗಳೂರು, ಆ.16: ತಾಲೂಕು ಪಂಚಾಯತ್ ವ್ಯಾಪ್ತಿಯ ಪಾವೂರು ಗ್ರಾಮದ ಉಳಿಯ ಎಂಬ ದ್ವೀಪವು ನೆರೆಯಿಂದ ಜಲಾವೃತಗೊಂಡಿದ್ದು, ಅಲ್ಲಿನ ನಿವಾಸಿಗಳ ನೆರವಿಗೆ ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು ಗುರುವಾರ ಭೇಟಿ ನೀಡಿ ನಿವಾಸಿಗಳಿಗೆ ಧೈರ್ಯ ತುಂಬಿದರು.

ಮುಂಜಾಗ್ರತಾ ಕ್ರಮಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಸೂಚನೆಯಂತೆ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡುತ್ತಿದ್ದು, ನಿವಾಸಿಗಳು ಆತಂಕಪಡಬೇಕಾಗಿಲ್ಲ ಎಂದು ಮೋನು ತಿಳಿಸಿದರು.

ಈ ಸಂದರ್ಭ ತಾಪಂ ಸದಸ್ಯ ಸಮದ್ ಅಡ್ಯಾರ್, ಪಾವೂರು ಗ್ರಾಪಂ ಸದಸ್ಯ ವಿವೇಕ್ ರೈ ಹಾಗೂ ಕಿನ್ಯ ಗ್ರಾಪಂ ಉಪಾಧ್ಯಕ್ಷ ಸಿರಾಜ್ ಕಿನ್ಯ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News