×
Ad

ಮೂಡುಬಿದಿರೆ: ಅಕ್ರಮ ಮರಸಾಗಾಟ ಪತ್ತೆ, ಆರೋಪಿ ವಶಕ್ಕೆ

Update: 2018-08-16 21:50 IST

ಮೂಡುಬಿದಿರೆ, ಆ. 16: ಅಕ್ರಮವಾಗಿ ಅಕೇಶಿಯಾ ಮರದ 39 ದಿಮ್ಮಿಗಳನ್ನು ಪಾಲಡ್ಕ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸಾಗಾಟ ಮಾಡುತ್ತಿದ್ದ ಟಾಟಾ 407 ವಾಹನವನ್ನು ತಡೆದು ನಿಲ್ಲಿಸಿ ಸೊತ್ತು ಸಹಿತ ವಾಹನ ಹಾಗೂ ಆರೋಪಿಯನ್ನು  ಮೂಡುಬಿದಿರೆ ಘಟಕದ ಉಪವಲಯ ಅರಣ್ಯ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡರು. 

ಆರೋಪಿಯನ್ನು ಸಂತೋಷ್ ಕೋಟ್ಯಾನ್ ಎಂದು ಗುರುತಿಸಲಾಗಿದೆ. ವಾಹನ ಮತ್ತು ಮರದ ಮೌಲ್ಯ ರೂ. 2 ಲಕ್ಷ ಎಂದು ಅಂದಾಜಿಸಲಾಗಿದೆ. ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ಅಶ್ವಿತ್ ಗಟ್ಟಿ, ಮಂಜುನಾಥ ಗಾಣಿಗ, ಅರಣ್ಯ ರಕ್ಷಕರಾದ ವಿನಾಯಕ ದುರದುಂಡಿ, ದಿವಾಕರ ರೈ, ಶಂಕರ ಗೌಡ ಪಾಲ್ಗೊಂಡಿದ್ದರು. ಕುಂದಾಪುರ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಕೆ., ಮೂಡುಬಿದಿರೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ. ಎಂ. ಅಚ್ಚಪ್ಪ ಇವರ ಮಾರ್ಗದರ್ಶನದಲ್ಲಿ  ವಲಯ ಅರಣ್ಯಾಧಿಕಾರಿ ಪ್ರಕಾಶ್ ಪೂಜಾರಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News