ಪಣಂಬೂರು: ನಾಪತ್ತೆಯಾಗಿದ್ದ ಮೀನುಗಾರನ ರಕ್ಷಣೆ

Update: 2018-08-17 05:07 GMT

ಮಂಗಳೂರು, ಆ.16: ಪಣಂಬೂರಿನ ನವ ಮಂಗಳೂರು ಬಂದರಿನ ಬಳಿ ಗಾಳಿಯ ರಭಸಕ್ಕೆ ಆಯ ತಪ್ಪಿ ದೋಣಿಯಿಂದ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದ ಮೀನುಗಾರ ತಮಿಳುನಾಡಿನ ನಾಗರಾಜನ್‌ನನ್ನು ನವ ಮಂಗಳೂರು ಬಂದರಿನ ಸಿಬಂದಿ ರಕ್ಷಿಸಿದ್ದಾರೆ.

ಮೀನುಗಾರಿಕೆಗೆ ತೆರಳಿದ್ದ ದೋಣಿಗಳು ಹಳೆ ಬಂದರು ದಕ್ಕೆಗೆ ಅಳಿವೆ ಬಾಗಿಲಿನ ಮೂಲಕ ಒಳ ಪ್ರವೇಶಿಸಲು ಸಾಧ್ಯವಾಗದ ಕಾರಣ ನವ ಮಂಗಳೂರು ಬಂದರಿಗೆ ಆಗಮಿಸುತ್ತಿದ್ದು, ಕೃಷ್ಣ ಮಾರುತಿ ಬೋಟ್‌ನಲ್ಲಿದ್ದ ನಾಗರಾಜ್ ಗುರುವಾರ ಬೆಳಗ್ಗೆ ಬೋಟ್ ಒಳಗೆ ಬರುತ್ತಿದ್ದಾಗ ಆಯ ತಪ್ಪಿ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದರು. ಬಳಿಕ ಅವರ ಶೋಧ ಕಾರ್ಯವನ್ನು ಎನ್‌ಎಂಪಿಟಿ ಸಿಬಂದಿ ನಡೆಸಿದಾಗ ಮಧ್ಯಾಹ್ನದ ವೇಳೆಗೆ ಪತ್ತೆಯಾಗಿದ್ದರು. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೀನುಗಾರಿಕೆಗೆ ತೆರಳಿದ ಸುಮಾರು 50-60ರಷ್ಟು ದೋಣಿಗಳು ಈಗ ಎನ್‌ಎಂಪಿಟಿ ಒಳಗೆ ಲಂಗರು ಹಾಕಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News