ಉಡುಪಿ ನಗರಸಭೆ ಚುನಾವಣೆ: ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

Update: 2018-08-17 15:39 GMT

ಉಡುಪಿ, ಆ.17: ಇದೇ ಆ.31ರಂದು ನಡೆಯುವ ಉಡುಪಿ ನಗರಸಭೆಯ ಚುನಾವಣೆಗೆ ಹಾಲಿ ಆಡಳಿತ ಪಕ್ಷವಾಗಿರುವ ಕಾಂಗ್ರೆಸ್‌ನ 25 ಅಭ್ಯರ್ಥಿಗಳ ಕೊನೆಯ ಪಟ್ಟಿಯನ್ನು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕರೆ ಅವರು ಬಿಡುಗಡೆಗೊಳಿಸಿದರು.

ಈ ಪಟ್ಟಿಯಲ್ಲಿ ನಾಲ್ವರು ಹಾಲಿ ಸದಸ್ಯರಿಗೆ ಟಿಕೇಟ್ ನೀಡಲಾಗಿದೆ. ಕಳೆದ ವಾರ ಪ್ರಕಟಿಸಿದ ಹತ್ತು ಸದಸ್ಯರ ಮೊದಲ ಪಟ್ಟಿಯಲ್ಲಿ ಆರು ಮಂದಿ ಹಾಲಿ ಸದಸ್ಯರಿಗೆ ಟಿಕೇಟ್ ನೀಡಲಾಗಿತ್ತು. ಪ್ರಕಟಗೊಂಡ ಅಭ್ಯರ್ಥಿಗಳ ಹೆಸರು ಹಾಗೂ ಅವರು ಸ್ಪರ್ಧಿಸುವ ವಾರ್ಡ್‌ಗಳು ಹೀಗಿವೆ.

ವಡಭಾಂಡೇಶ್ವರ - ಶೇಖರ್ ಜಿ. ಕೋಟ್ಯಾನ್, ಮಲ್ಪೆ ಸೆಂಟ್ರಲ್ - ಬಬಿತಾ, ಮೂಡುಬೆಟ್ಟು- ಹರ್ಮಿಸ್ ನೊರೋನ್ಹಾ ಕೊಡಂಕೂರು- ಜ್ಯೋತಿಲಕ್ಷ್ಮೀ, ನಿಟ್ಟೂರು- ನಾರಾಯಣ ಜತ್ತನ್ನ, ಸುಬ್ರಹ್ಮಣ್ಯ ನಗರ - ಸುಜಾತ ಆಚಾರ್ಯ, ಗೋಪಾಲಪುರ - ಐರಿನ್ ಮೆನೆಜಸ್, ಕಕ್ಕುಂಜೆ- ಅಶೋಕ್ ಪೂಜಾರಿ, ಕರಂಬಳಿ- ಯಾದವ ಆಚಾರ್ಯ, ಮೂಡು ಪೆರಂಪಳ್ಳಿ- ಸೆಲಿನ್ ಕರ್ಕಡ, ಸರಳೇಬೆಟ್ಟು- ದೇವಕಿ ಎಸ್. ಕೋಟ್ಯಾನ್, ಶೆಟ್ಟಿಬೆಟ್ಟು- ಸವಿತಾ ನಾಯಕ್, ಪರ್ಕಳ- ಪೂರ್ಣಿಮಾ ಸುಜಿತ್ ಶೆಟ್ಟಿಗಾರ್, ಮೂಡುಸಗ್ರಿ -ಜಾನಕಿ ಕೃಷ್ಣ ನಾಯ್ಕಿ, ಇಂದ್ರಾಳಿ-ರಾಘವೇಂದ್ರ ನಾಯ್ಕಾ, ಇಂದಿರಾ ನಗರ- ಹಿಲರಿ ಜತ್ತನ್ನ, ಕಸ್ತೂರ್‌ಬಾ ನಗರ- ಪ್ರಣಮ್ ಕುಮಾರ್, ಕುಂಜಿಬೆಟ್ಟು- ಶಶಿರಾಜ್ ಕುಂದರ್, ಕಡಿಯಾಳಿ - ಆಶಾ ಶ್ರೀನಿವಾಸ್, ಬನ್ನಂಜೆ- ರೇಖಾ ಬಿ. ಪೂಜಾರಿ, ತೆಂಕಪೇಟೆ- ಜಯಶ್ರೀ ಶೇಟ್, ಒಳಕಾಡು- ಜ್ಯೋತಿ ಹೆಬ್ಬಾರ್, ಅಜ್ಜರಕಾಡು- ಸುಮನ ಸುರೇಂದ್ರ ಆಚಾರ್ಯ, ಅಂಬಲಪಾಡಿ-ರೊನಾಲ್ಡ್ ಪ್ರವೀಣ್ ಕುಮಾರ್.

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

ಉಡುಪಿ ನಗರಸಭೆಗೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಲು ಮೂವರು ಹಾಲಿ ಸದಸ್ಯರು ಸೇರಿದಂತೆ ಒಟ್ಟು 35 ಅಭ್ಯರ್ಥಿಗಳ ಪಟ್ಟಿಯನ್ನು ಭಾರತೀಯ ಜನತಾ ಪಕ್ಷ ಪ್ರಕಟಿಸಿದೆ.

ಪಕ್ಷದ ಜಿಲ್ಲಾ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಪಟ್ಟಿಯನ್ನು ಬಿಡುಗಡೆಗೊಳಿಸಿದರು. ಸತತ ಮೂರು ಬಾರಿ ನಗರಸಭೆಯ ಸದಸ್ಯರಾಗಿ ಆಯ್ಕೆಯಾಗಿರುವ ಹಿರಿಯ ಸದಸ್ಯ ಮಹೇಶ್ ಠಾಕೂರ್ ಈ ಬಾರಿ ಬೈಲೂರು ವಾರ್ಡಿನಿಂದ ತನ್ನ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ.

ಕಳೆದೆರಡು ನಗರಸಭೆಗಳಲ್ಲಿ ಬಿಜೆಪಿಯನ್ನು ಪ್ರತಿನಿಧಿಸಿದ್ದ ಸುಮಿತ್ರಾ ಆರ್. ನಾಯಕ್ ಮತ್ತೆ ಪರ್ಕಳದಿಂದ ಸ್ಪರ್ಧೆಯಲ್ಲಿದ್ದಾರೆ. ಪಕ್ಷದ ಜಿಲ್ಲಾ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಅ್ಯಕ್ಷಮಟ್ಟಾರುರತ್ನಾಕರಹೆಗ್ಡೆಪಟ್ಟಿಯನ್ನುಬಿಡುಗಡೆಗೊಳಿಸಿದರು.ಸತತಮೂರುಬಾರಿನಗರಸೆಯ ಸದಸ್ಯರಾಗಿ ಆಯ್ಕೆಯಾಗಿರುವ ಹಿರಿಯ ಸದಸ್ಯ ಮಹೇಶ್ ಠಾಕೂರ್ ಈ ಬಾರಿ ಬೈಲೂರು ವಾರ್ಡಿನಿಂದ ತನ್ನ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ.

ಕಳೆದ ಬಾರಿ ಕಾಂಗ್ರೆಸ್ ಟಿಕೇಟ್‌ನಿಂದ ಗೆದ್ದು ಕೊನೆಯ ಹಂತದಲ್ಲಿ ಬಿಜೆಪಿಗೆ ನೆಗೆದ ಗೀತಾ ದೇವರಾಯ ಶೇಟ್ ಕಡಿಯಾಳಿಯಿಂದಲೇ ಮತ್ತೆ ಸ್ಪರ್ಧಿಸು ತಿದ್ದಾರೆ. ಇನ್ನುಳಿದಂತೆ ನಗರ ಬಿಜೆಪಿ ಅಧ್ಯಕ್ಷ ಪ್ರಭಾಕರ ಪೂಜಾರಿ ಐದು ವರ್ಷಗಳ ಬಳಿಕ ಗುಂಡಿಬೈಲ್ ವಾರ್ಡಿನಿಂದ ಸ್ಪರ್ಧಿಸಿದ್ದರೆ, ಹಿಂದೆ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಎಡ್ಲಿನ್ ಕರ್ಕಡ ಈ ಬಾರಿ ಮಲ್ಪೆ ಸೆಂಟ್ರಲ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.

35 ವಾರ್ಡುಗಳಲ್ಲೂ ಪ್ರತ್ಯೇಕ ಸಭೆ ನಡೆಸಿ 16 ಸದಸ್ಯರ ಚುನಾವಣಾ ಸಮಿತಿ ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಿದೆ. ಒಂದಕ್ಕಿಂತ ಹೆಚ್ಚು ಆಕಾಂಕ್ಷಿಗಳಿದ್ದ ಕಡೆಗಳಲ್ಲಿ ಎಲ್ಲರ ಮನವೊಲಿಸಿ ಅಭ್ಯರ್ಥಿಗಳನ್ನು ಅಂತಿಮ ಗೊಳಿಸಲಾಗಿದೆ ಎಂದು ಶಾಸಕ ಕೆ.ರಘುಪತಿ ಭಟ್ ತಿಳಿಸಿದರು. ಈ ಬಾರಿ ಬಿಜೆಪಿ ಪರವಾದ ವಾತಾವರಣ ಕಂಡುಬಂದಿದ್ದು, ಬಿಜೆಪಿ ಕನಿಷ್ಠ 28 ಸ್ಥಾನ ಗೆಲ್ಲುವ ವಿಶ್ವಾಸವಿದೆ ಎಂದು ಭಟ್ ತಿಳಿಸಿದರು. ಪಕ್ಷದ ಅಭ್ಯರ್ಥಿಗಳ ವಿವರ ಹೀಗಿದೆ.

ಕೊಳ: ಲಕ್ಷ್ಮೀ ಮಂಜುನಾಥ ಸಾಲಿಯಾನ್, ವಡಬಾಂಡೇಶ್ವರ: ಯೋಗೀಶ್ ಬಿ.ಸಾಲ್ಯಾನ್, ಮಲ್ಪೆ ಸೆಂಟ್ರಲ್:ಎಡ್ಲಿನ್ ಕರ್ಕಡ, ಕೊಡವೂರು: ವಿಜಯ ಕೊಡವೂರು, ಕಲ್ಮಾಡಿ: ಸುಂದರ ಜೆ. ಕಲ್ಮಾಡಿ, ಮೂಡಬೆಟ್ಟು: ಶ್ರೀಶ ಭಟ್ ಕೊಡವೂರು, ಕೊಡಂಕೂರು: ಸಂಪಾವತಿ, ನಿಟ್ಟೂರು: ಸಂತೋಷ ಜತ್ತನ್ನ, ಸುಬ್ರಹ್ಮಣ್ಯ ನಗರ: ಜಯಂತಿ ಕೆ.ಪೂಜಾರಿ, ಗೋಪಾಲಪುರ: ಮಂಜುಳಾ ವಿ.ನಾಯಕ್, ಕಕ್ಕುಂಜೆ: ಡಿ.ಬಾಲಕೃಷ್ಣ ಶೆಟ್ಟಿ, ಕರಂಬಳ್ಳಿ: ಗಿರಿಧರ ಆಚಾರ್ಯ, ಮೂಡುಪೆರಂಪಳ್ಳಿ: ಅರುಣಾ ಎಸ್.ಪೂಜಾರಿ, ಸರಳೇಬೆಟ್ಟು: ವಿಜಯಲಕ್ಷ್ಮೀ, ಶೆಟ್ಟಿಬೆಟ್ಟು: ಅಶ್ವಿನಿ ಅರುಣ್ ಪೂಜಾರಿ, ಪರ್ಕಳ: ಸುಮಿತ್ರಾ ಆರ್.ನಾಯಕ್, ಈಶ್ವರನಗರ: ಮಂಜುನಾಥ ಶೆಟ್ಟಿಗಾರ್, ಮಣಿಪಾಲ: ಕಲ್ಪನಾ ಸುಧಾಮ.

ಮೂಡುಸಗ್ರಿ: ಭಾರತಿ ಪ್ರಶಾಂತ್, ಇಂದ್ರಾಳಿ: ಅಶೋಕ ನಾಯ್ಕ, ಇಂದಿರಾ ನಗರ: ಚಂದ್ರಶೇಖರ ಯು.ಶೇರಿಗಾರ್, ಬಡಗುಬೆಟ್ಟು: ಅರುಣ್ ಶೆಟ್ಟಿಗಾರ್, ಚಿಟ್ಪಾಡಿ: ಶ್ರೀಕೃಷ್ಣರಾವ್ ಕೊಡಂಚ, ಕಸ್ತೂರ್ಬಾ ನಗರ: ರಾಜು, ಕುಂಜಿಬೆಟ್ಟು: ಗಿರೀಶ ಎಂ.ಆಂಚನ್, ಕಡಿಯಾಳಿ: ಗೀತಾ ದೇವರಾಯ ಶೇಟ್, ಗುಂಡಿಬೈಲು: ಪ್ರಭಾಕರ ಪೂಜಾರಿ, ಬನ್ನಂಜೆ: ಸವಿತಾ ಹರೀಶ್ ರಾಂ ಭಂಡಾರಿ, ತೆಂಕಪೇಟೆ: ಮಾನಸಿ ಸಿ.ಪೈ, ಒಳಕಾಡು: ರಜನಿ ಹೆಬ್ಬಾರ್, ಬೈಲೂರು: ಮಹೇಶ ಠಾಕೂರ್, ಕಿನ್ನಿಮೂಲ್ಕಿ: ಜ್ಯೋತಿ ರಾಮನಾಥ ಶೆಟ್ಟಿ, ಅಜ್ಜರಕಾಡು: ರಶ್ಮಿ ಚಿತ್ತರಂಜನ್ ಭಟ್, ಶಿರಿಬೀಡು: ಟಿ.ಜಿ.ಹೆಗ್ಡೆ, ಅಂಬಲಪಾಡಿ: ಹರೀಶ್ ಶೆಟ್ಟಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News