ಪತ್ರಕರ್ತ ಇಸ್ಮಾಈಲ್ ಶಾಫಿ ನಿಧನ

Update: 2018-08-17 17:54 GMT

ಮಂಗಳೂರು, ಆ. 17: “ಇಶಾ ಪತ್ರಿಕೆ”ಯ ಸಂಪಾದಕರೂ ಪ್ರಸಿದ್ಧ ವಾಗ್ಮಿಯೂ ಚಿಂತಕರು ಆಗಿದ್ದ ಇಸ್ಮಾಈಲ್  ಶಾಫಿಯವರು ಇಂದು ನಿಧನರಾದರು.

ಹಿಂದೊಮ್ಮೆ ಸಲಫಿ ಸಂಘಟನೆಯ ಟೀಕಕಾರರಾಗಿದ್ದ ಅವರು ಸುಮಾರು ಹದಿನೈದು ವರ್ಷಗಳ ಹಿಂದೆ ಸಲಫಿ ಸಂಘಟನೆಯ ಸಂಪರ್ಕಕ್ಕೆ ಬಂದ ನಂತರ ಅದರ ಧಾರ್ಮಿಕ ಉದ್ಧೇಶವರಿತು ಸಲಫಿ ಸಂಘಟನೆಯ ಮುಖ್ಯಸ್ಥ ಪದವಿಗೆ ಸೌತ್ ಕರ್ನಾಟಕ ಸಲಫಿ ಮೂವ್‍ಮೆಂಟ್ ನ ಉಪಾಧ್ಯಕ್ಷರಾಗಿ ಆಯ್ಕೆ ಗೊಂಡಿದ್ದರು, ಸಂಘಟನೆಯ ಮುಖವಾಣಿ “ಪವಿತ್ರ ಸಂದೇಶ” ಪಾಕ್ಷಿಕದ ಉಪ ಸಂಪಾದಕರು ಆಗಿದ್ದರು.

ಅವರ ನಿಧನವು ಸಲಫಿ ಸಂಘಟನೆಗೆ ದೊಡ್ಡ ನಷ್ಟವಾಗಿದೆ ಎಂದು ಸೌತ್ ಕರ್ನಾಟಕ ಸಲಫಿ ಮೂವ್‍ಮೆಂಟ್  ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News