ಮುಲ್ಕಿ : ಜೆಡಿಎಸ್ ವತಿಯಿಂದ ರೋಗಿಗಳಿಗೆ ಹಣ್ಣುಹಂಪಲು ವಿತರಣೆ.

Update: 2018-08-17 18:11 GMT

ಮುಲ್ಕಿ, ಆ. 17:  ಸ್ವಾತಂತ್ರೋತ್ಸವದ ಅಂಗವಾಗಿ ಜನತಾದಳ ಜಾತ್ಯತೀತ ಪಕ್ಷ, ಮುಲ್ಕಿ ಇದರ ವತಿಯಿಂದ ಹಣ್ಣುಹಂಪಲು ವಿತರಣೆ ನಡೆಯಿತು.

ಜೆಡಿಎಸ್ ಮುಲ್ಕಿ ಕಾರ್ಯಕರ್ತರ ತಂಡ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಮುಲ್ಕಿ ಸಮುದಾಯ ಅರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಒಳ ಹಾಗು ಹೊರರೋಗಿಗಳಿಗೆ ಹಣ್ಣುಹಂಪಲನ್ನು ವಿತರಿಸಿದರು.

ಸಮುದಾಯ ಅರೋಗ್ಯ ಕೇಂದ್ರ ವೈದ್ಯಾಧಿಕಾರಿ ಮತ್ತು ಮಕ್ಕಳ ತಜ್ಞರಾದ ಡಾ.ಕೃಷ್ಣ, ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರಾದ ಡಾ.ಪೂರ್ಣಿಮಾ, ಆಯುರ್ವೇದಿಕ್ ತಜ್ಞ ಡಾ.ಇರ್ಫಾನ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಹಕರಿಸಿದರು.

ಈ ಸಂಧರ್ಭದಲ್ಲಿ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಇಕ್ಬಾಲ್ ಅಹ್ಮದ್ ಮುಲ್ಕಿ, ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷರಾದ ರಿಯಾಜ್ ಹೆಚ್.ಕಾರ್ನಾಡ್, ಮಾಜಿ ನಗರ ಪಂಚಾಯತ್ ಅಧ್ಯಕ್ಷ ಶಶಿಕಾಂತ್ ಶೆಟ್ಟಿ, ನೂರುಲ್ಲಾ ಶೇಕ್, ವಿಶ್ವನಾಥ್, ಸಲಾಂ ಹುಸೈನ್, ಮನ್ಸೂರು ಕೊಳ್ನಾಡ್, ಶ್ರೀಮತಿ ಶಶಿಕಲಾ ಶೆಟ್ಟಿ, ಸಾದಿಕ್ ಕಿಲ್ಪಾಡಿ, ಜಗನ್ನಾಥ್ ಮಾಬೆನ್, ಅಮಾನುಲ್ಲಾ ಮುಲ್ಕಿ, ಅಸ್ಲಾಂ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News