ಅಪಘಾತ: ಸಾಲಾಗಿ ನಿಲ್ಲಿಸಿದ್ದ 20 ಬೈಕ್‌ಗಳು ಜಖಂ

Update: 2018-08-18 17:35 GMT

ಮಂಗಳೂರು, ಆ.18: ಇಂಟರ್‌ಲಾಕ್ ಅಳವಡಿಸಿದ ರಸ್ತೆಯಲ್ಲಿ ಸಾಲಾಗಿ ನಿಲ್ಲಿಸಿದ್ದ 20 ಬೈಕ್‌ಗಳಿಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಎಲ್ಲ ಬೈಕ್‌ಗಳು ಜಖಂಗೊಂಡ ಘಟನೆ ನಗರದ ಶರ್ಬತ್ ಕಟ್ಟೆ ಬಳಿಯ ಸುಜುಕಿ ಶೋರೂಂ ಮುಂಭಾಗ ಶನಿವಾರ ಬೆಳಗ್ಗೆ ನಡೆದಿದೆ.

ಸ್ಥಳೀಯ ನಿವಾಸಿ ಅಬ್ದುಲ್ ಅಝೀಝ್ ಬೈಕ್ ಜಖಂಗೊಳಿಸಿದ ಆರೋಪಿ. ಕೆಪಿಟಿ ಕಡೆಯಿಂದ ವಿಮಾನ ನಿಲ್ದಾಣ ಕಡೆಗೆ ಕಾರಿನಲ್ಲಿ ತೆರಳುತ್ತಿದ್ದ ಆರೋಪಿ ಅಝೀಝ್, ನಾಯಿ ಅಡ್ಡ ಬಂದ ಕಾರಣ ನಿಯಂತ್ರಣ ತಪ್ಪಿ ನಿಂತಿದ್ದ ಬೈಕ್‌ಗಳಗಿಗೆ ಢಿಕ್ಕಿ ಹೊಡೆಸಿದ್ದಾರೆ. ಪರಿಣಾಮ 20 ಹೊಸ ಬೈಕ್‌ಗಳು ಜಖಂಗೊಂಡಿವೆ.

ಶೋರೂಂ ಮ್ಯಾನೇಜರ್ ಪ್ರಿತೇಶ್ ಶೆಟ್ಟಿ ನೀಡಿದ ದೂರಿನಂತೆ ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News