ಚಾರ್ಮಾಡಿ ಘಾಟ್: ಎಸ್ಡಿಪಿಐ ಚಾರ್ಮಾಡಿ ವಲಯದಿಂದ ಸಮಾಜಸೇವೆ

Update: 2018-08-18 17:48 GMT

ಬೆಳ್ತಂಗಡಿ, ಆ. 18: ಭಾರೀ ಘನ ವಾಹನಗಳ ಸಂಚಾರದಿಂದ ಚಾರ್ಮಾಡಿ ಘಾಟ್ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಚಾರ್ಮಾಡಿ ವಲಯ ಕಾರ್ಯಕರ್ತರು ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಭಾರೀ ಗಾತ್ರದ ವಾಹನಗಳು ಸಂಚರಿಸುತ್ತಿದ್ದು ಅಲ್ಲಲ್ಲಿ ಕುಸಿತ ಉಂಟಾಗಿದೆ. ರಸ್ತೆ ದುರಸ್ತಿ ಸೇರಿದಂತೆ ತೊಂದರೆಗೊಳಗಾಗುವ ಪ್ರಯಾಣಿಕರಿಗೆ ಸಾಹಯಸ್ತ ನೀಡುವಲ್ಲಿ ಇಲ್ಲಿನ ಯುವಕರು ನಿರಂತರವಾಗಿ ಕಾರ್ಯಚರಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News