ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ
Update: 2018-08-19 17:18 GMT
ಹೆಬ್ರಿ, ಆ.19: ತೀವ್ರ ಮದ್ಯಪಾನ ಸೇವನೆ ಚಟ ಹೊಂದಿದ್ದ ಸೋಮೇಶ್ವರ ನಿವಾಸಿ ಹೂವಪ್ಪ(75) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಆ.18 ರಂದು ಸಂಜೆ ವೇಳೆ ಸೊಮೇಶ್ವರ ಎಂಬಲ್ಲಿ ಹಳೇ ಚೆಕ್ ಪೋಸ್ಟನ ಹಾಳು ಬಿದ್ದ ಕಟ್ಟಡದ ಜಗಲಿಯ ಮೇಲಿನ ಕಬ್ಬಿಣದ ರಾಡ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಂಕರನಾರಾಯಣ: ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಅಂಪಾರು ಗ್ರಾಮದ ಮೂಡುಬಗೆ ಶೇಡಿಕೊಡ್ಲು ನಿವಾಸಿ ಶೀನ ಮೊಗವೀರ (62) ಎಂಬ ವರು ಆ.18ರಂದು ಸಂಜೆ ವೇಳೆ ಹಳೆಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.