ಅಂದರ್ ಬಾಹರ್: ಐವರು ಬಂಧನ
Update: 2018-08-19 17:18 GMT
ಬೈಂದೂರು, ಆ.19: ಹೆರಂಜಾಲು ಶಿವತೃಪ್ತಿ ಹೋಟೆಲ್ ಬಳಿ ಆ.18 ರಂದು ಸಂಜೆ ವೇಳೆ ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ಐದು ಮಂದಿಯನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕಂಬದಕೋಣೆಯ ಸತೀಶ(32), ಕಾಲ್ತೋಡಿನ ಪ್ರಕಾಶ್ ಶೆಟ್ಟಿ (33), ನಾಗರಾಜ ಗೌಡ(46), ನಾಗರಾಜ ಶೆಟ್ಟಿ(50), ಪ್ರಶಾಂತ(32) ಎಂದು ಗುರುತಿಸಲಾಗಿದೆ. ಇವರಿಂದ 2050ರೂ. ನಗದನ್ನು ವಶಪಡಿಸಿಕೊಳ್ಳ ಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.