ಕಾರವಾರ: ಆಸ್ತಿ ವಿವಾದ; ವ್ಯಕ್ತಿಯ ಕಡಿದು ಕೊಲೆ

Update: 2018-08-20 16:53 GMT

ಕಾರವಾರ, ಆ. 20: ಆಸ್ತಿ ವಿವಾದಕ್ಕೆ ಸಂಬಂಧಿಸಿಂದಂತೆ ಸಂಬಂಧಿಯನ್ನೇ ಕತ್ತಿಯಿಂದ ಕಡಿದು ಕೊಲೆ ಮಾಡಿದ ಘಟನೆ ಉತ್ತರ ಕನ್ನಡದ ಹೊನ್ನಾವರ ತಾಲೂಕಿನ ತಾಳಮಕ್ಕಿ ಗ್ರಾಮದಲ್ಲಿ ನಡೆದಿದೆ.

ಮಹಾಬಲೇಶ್ವರ ಹಾಲಪ್ಪ ನಾಯ್ಕ (67) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.

ಉಮೇಶ್ ಲಕ್ಷ್ಮಣ್ ನಾಯ್ಕ (48) ಕೊಲೆ ಮಾಡಿದ ಆರೋಪಿ. ಇವರ ನಡುವೆ ಕಳೆದ ಅನೇಕ ದಿನಗಳಿಂದ ಆಸ್ತಿ ವಿವಾದ ನಡೆಯುತ್ತಿತ್ತು ಎಂದು ಹೇಳಲಾಗುತ್ತಿದೆ. ಸೋಮವಾರ ಇವರಿಬ್ಬರ ನಡುವೆ ನಡೆದ ಜಗಳ ಹತ್ಯೆಯಲ್ಲಿ ಅಂತ್ಯವಾಗಿದೆ.

ಉಮೇಶ ನಾಯ್ಕ ಕೈಯಲ್ಲಿದ್ದ ಕತ್ತಿಯಿಂದ ಮಹಾಬಲೇಶ್ವರ ನಾಯ್ಕ ಅವರಿಗೆ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎಂದು ಹೊನ್ನಾವರ 
ಮಂಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯ ಪೊಲೀಸರು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News