ಬಾವಿಗೆ ಬಿದ್ದು ಮೃತ್ಯು

Update: 2018-08-20 17:19 GMT

ಕಾಪು, ಆ.20: ಆಯತಪ್ಪಿ ಬಾವಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಆ.19ರಂದು ಸಂಜೆ ವೇಳೆ ಕಟಪಾಡಿ ಅಗ್ರಹಾರ ಕಾಳಿಕಾಂಬ ದೇವಸ್ಥಾನದ ಸಮೀಪ ನಡೆದಿದೆ.

ಮೃತರನ್ನು ಕಟಪಾಡಿ ಅಗ್ರಹಾರ ಕಾಳಿಕಾಂಬ ದೇವಸ್ಥಾನದ ಹತ್ತಿರದ ನಿವಾಸಿ ಭರತ ಶೇರಿಗಾರ(58) ಎಂದು ಗುರುತಿಸಲಾಗಿದೆ. ಇವರು ಕೆಲಸ ಮುಗಿಸಿ ಮನೆಗೆ ಬಂದು, ಮನೆ ಹತ್ತಿರದ ತೆರೆದ ಬಾವಿಗೆ ಕೈ, ಕಾಲು ತೊಳೆಯಲು ಹೋದಾಗ ಆಯತಪ್ಪಿಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಇವರ ಮೃತದೇಹವು ರಾತ್ರಿ 11ಗಂಟೆ ಸುಮಾರಿಗೆ ಪತ್ತೆಯಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News