ಅನಾರೋಗ್ಯ ಪೀಡಿತ ಮಗುವಿಗೆ ನೆರವು

Update: 2018-08-21 14:01 GMT

ಉಡುಪಿ, ಆ.21: ಉಡುಪಿ ಸಂಭ್ರಮ ಕಲ್ಚರಲ್ ಟ್ರಸ್ಟ್ ಹಾಗೂ ಮಲ್ಪೆ ರಿಯಲ್ ಸ್ಟಾರ್ ಗ್ರೂಪ್ ವತಿಯಿಂದ ಬ್ಲಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ದೀಕ್ಷಾ ಯು. ಕುಂದರ್ ಅವರಿಗೆ ಸುಮಾರು 60,000ರೂ. ಧನ ಸಹಾಯ ಮಾಡಲಾಯಿತು.

ಹಲವು ದಿನಗಳಿಂದ ಕಾಲೇಜು ವಿದ್ಯಾರ್ಥಿಗಳಿಂದ ಹಾಗೂ ಸಾರ್ವಜನಿಕರಿಂದ ಸಂಗ್ರಹಿಸಿದ ಈ ಮೊತ್ತವನ್ನು ಮಗುವಿನ ತಂದೆ ಬ್ರಹ್ಮಾವರ ಉಪ್ಪಿನ ಕೋಟೆಯ ಉಮೇಶ್ ಕುಂದರ್ ಇವರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಸಂಭ್ರಮ ಕಲ್ಚರಲ್ ಟ್ರಸ್ಟ್‌ನ ಅಧ್ಯಕ್ಷ ಸಂದೀಪ್ ಕಾಮತ್, ಪ್ರಧಾನ ಕಾರ್ಯದರ್ಶಿ ಭುವನೇಶ್ ಪ್ರಭು ಹಿರೇಬೆಟ್ಟು, ಉಪಾಧ್ಯಕ್ಷ ಪ್ರವೀಣ್ ನಾಯಕ್, ಕೋಶಾಧಿಕಾರಿ ಲಕ್ಷ್ಮೀಂದ್ರ ಪೆರಂಪಳ್ಳಿ, ಜೊತೆ ಕಾರ್ಯದರ್ಶಿ ಸುಹಾಸ್ ಶೆಣೈ, ಸದಸ್ಯರುಗಳಾದ ರಶ್ಮಿ ನಾಯಕ್ ಕಾರ್ಕಳ, ಭವ್ಯಾಶೀ ಪ್ರಭು, ಪ್ರಸಾದ್ ನಾಯಕ್, ಶ್ರೀಕಾಂತ್ ನಾಯಕ್, ಸುಕೇಶ್ ಕುಮಾರ್, ರಿಯಲ್ ಸ್ಟಾರ್ ಗ್ರೂಪ್‌ನ ರಶ್ಮಿತಾ ಮಲ್ಪೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News