ಚಿತ್ರಕಲಾ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ

Update: 2018-08-21 14:07 GMT

ಹೆಬ್ರಿ, ಆ.21: ಹೆಬ್ರಿ ಚಾಣಕ್ಯ ಚಿತ್ರಕಲಾ ತರಬೇತಿ ಸಂಸ್ಥೆಯ ಆಶ್ರಯದಲ್ಲಿ ಸ್ವಾತಂತ್ರೋತ್ಸವದ ಅಂಗವಾಗಿ ಏರ್ಪಡಿಸಲಾದ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಇತ್ತೀಚೆಗೆ ಬಹುಮಾನ ವಿತರಿಸಲಾಯಿತು.

ಮುಖ್ಯ ಅತಿಥಿಯಾಗಿ ಉದ್ಯಮಿ ಭಾರತಿ ನಾಲ್ಕೂರು ಮಾತನಾಡಿ, ಚಿಕ್ಕಂದಿನಿಂದಲೇ ಮಕ್ಕಳಲ್ಲಿರುವ ಆಸಕ್ತಿಯನ್ನು ಗುರುತಿಸಿ ಅವರಿಗೆ ಸೂಕ್ತ ಮಾರ್ಗದರ್ಶನದೊಂದಿಗೆ ತರಬೇತಿ ನೀಡಿದಾಗ ಅವರಲ್ಲಿರುವ ಪ್ರತಿಭೆ ಹೊರ ಬರಲು ಸಾಧ್ಯ ಎಂದರು.

ಕಿಡ್ಸ್ ವಿಭಾಗದಲ್ಲಿ ನರ್ಮದಾ ಪ್ರಥಮ, ಅನುಸ್ಕಾ ದ್ವಿತೀಯ, ಜ್ಯೂನಿಯರ್ ವಿಭಾಗದಲ್ಲಿ ರೋಶಿತ್ ಪ್ರಥಮ ,ಮಾನ್ಯ ದ್ವಿತೀಯ, ಸೀನಿಯರ್ ವಿಭಾಗದಲ್ಲಿ ಸ್ನೇಹ ಪ್ರಥಮ, ಸ್ವಸ್ತಿಕ್ದ್ವಿತೀಯ ಸ್ಥಾನ ಪಡೆದುಕೊಂಡರು.

ಈ ಸಂದರ್ಭದಲ್ಲಿ ಉದ್ಯಮಿ ಸುಧಾಕರ ಶೆಟ್ಟಿ ಬರ್ಸಬೆಟ್ಟು, ಶಿಕ್ಷಕಿ ರಜನಿ, ಸಂಸ್ಥೆಯ ಅಧ್ಯಕ್ಷ ಉದಯ ಶೆಟ್ಟಿ, ಪ್ರಾಂಶುಪಾಲೆ ವೀಣಾ ಯು.ಶೆಟ್ಟಿ, ಚಿತ್ರಕಲಾ ಶಿಕ್ಷಕಿ ಸುಕನ್ಯ, ಸಂಗೀತ ತರಬೇತುದಾರ ಮುಟ್ಲಪಾಡಿ ಉದಯ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News