ಅಕ್ರಮ ಗೋಸಾಗಾಟ :ಓರ್ವನ ಬಂಧನ

Update: 2018-08-21 14:27 GMT

ಬೆಳ್ತಂಗಡಿ,ಆ.21 : ಬೆಳ್ತಂಗಡಿಯಿಂದ ಕಾರ್ಕಳಕ್ಕೆ ಸಾಗಿಸುತ್ತಿದ್ದ ಅಕ್ರಮ ಗೋಸಾಗಾಟವನ್ನು ಪತ್ತೆಹಚ್ಚುವಲ್ಲಿ ಬೆಳ್ತಂಗಡಿ ಎಸ್‍ಐ ರವಿ ಮತ್ತು ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. 

ಮಂಗಳವಾರ ಮುಂಜಾನೆ 5ಗಂಟೆ ವೇಳೆಗೆ ಗುರುವಾಯನಕೆರೆ ಬಳಿ ಅತೀವೇಗದಲ್ಲಿ ಹೋಗುತ್ತಿದ್ದ ಪಿಕಪ್ ವಾಹನವೊಂದನ್ನು ತಡೆದು ನಿಲ್ಲಿಸಿ ತಪಾಸಣೆ ವೇಳೆ ಓರ್ವರನ್ನು ಬಂಧಿಸಿದ್ದು, ಇನ್ನೋರ್ವ ಪರಾರಿಯಾಗಿದ್ದಾನೆ. ಬಂಧಿತ ದೌಲತ್ ಬಾಷಾ ಮೆಲಂತಬೆಟ್ಟು ಪಕ್ಕಿದಕಲ ನಿವಾಸಿಯಾಗಿದ್ದು, ಪೊಟ್ಟುಕೆರೆ ನಿವಾಸಿ ಅನ್ಸಾರ್ ಪರಾರಿಯಾಗಿದ್ದಾನೆ. ವಾಹನದಲ್ಲಿ ಎರಡು ತಿಂಗಳ ಕರುವಿನಿಂದ ಹಿಡಿದು 6 ಕರುಗಳು ಹಾಗೂ ಒಂದು ದನವನ್ನು ಅಮಾನುಷವಾಗಿ ಸಾಗಿಸುತ್ತಿದ್ದರು. ವಾಹನ ಹಾಗೂ ದನಕರುಗಳನ್ನು ವಶಪಡಿಸಿಕೊಂಡ ಪೋಲೀಸರು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News