ಗಾಂಜಾ ಸೇವನೆ: ಆರು ಮಂದಿ ವಶಕ್ಕೆ

Update: 2018-08-21 16:21 GMT

ಉಡುಪಿ, ಆ.21: ಗಾಂಜಾ ಸೇವನೆಗೆ ಸಂಬಂಧಿಸಿ ಆರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.

ಆ.18ರಂದು ಉಡುಪಿ ಸೆನ್ ಅಪರಾಧ ಪೊಲೀಸರು ಕಟಪಾಡಿ ಫಾರೆಸ್ಟ್ ಗೇಟ್ ಬಳಿ ಕಲ್ಮಾಡಿಯ ಅಖ್ತರ್(23), ಉದ್ಯಾವರ ಗ್ರಾಮದ ಮಸೀದಿ ಬಳಿ ಕಿನ್ನಿಮುಲ್ಕಿಯ ಪರ್ವೆಜ್ ಅಹಮ್ಮದ್(19), ಆ.20ರಂದು ಉಡುಪಿ ಡಿಸಿಐಬಿ ಪೊಲೀಸರು ಬ್ರಹ್ಮಾವರ ತಾಲೂಕು ಕಛೇರಿ ಬಳಿ ಮಟಪಾಡಿಯ ಅಣ್ಣಪ್ಪ ಪೂಜಾರಿ(40), ಉಡುಪಿ ಎಂಜಿಎಂ ಕಾಲೇಜು ಬಳಿ ಕುಂಜಿಬೆಟ್ಟುವಿನ ಮೊಹಮ್ಮದ್ ಶೊಯಿಬ್(28) ಎಂಬವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಆ.19ರಂದು ಮಣಿಪಾಲದಲ್ಲಿ ಮಣಿಪಾಲ ಪೊಲೀಸರು ಅಂಬಾಗಿಲಿನ ನಾಗಭೂಷಣ(39), ದೊಡ್ಡಣಗುಡ್ಡೆಯ ಅಬ್ದುಲ್ ಖಯಾನ್(41) ಎಂಬವ ರನ್ನು ವಶಕ್ಕೆ ಪಡೆದು ಮಣಿಪಾಲ ಕೆಎಂಸಿ ಫಾರೆನ್ಸಿಕ್ ವಿಭಾಗದಲ್ಲಿ ಪರೀಕ್ಷಿಸಿದ್ದು, ಇದರ ವರದಿಯಂತೆ ಆರೋಪಿಗಳು ಗಾಂಜಾ ಸೇವಿನೆ ಮಾಡಿರುವುದು ಖಚಿತ ಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News