×
Ad

ಕಾರು ಪಲ್ಟಿ: ಯುವಕ ಮೃತ್ಯು

Update: 2018-08-22 12:50 IST

ಕಾಸರಗೋಡು, ಆ.22 :   ಬದಿಯಡ್ಕ ಠಾಣಾ ವ್ಯಾಪ್ತಿಯ ನೀರ್ಚಾಲ್ ನಲ್ಲಿ ಮಂಗಳವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಯುವಕ ಇಂದು ಮೃತಪಟ್ಟಿದ್ದಾರೆ.

ಬದಿಯಡ್ಕ ಠಾಣಾ ವ್ಯಾಪ್ತಿಯ ನೀರ್ಚಾಲ್ ನಲ್ಲಿ ಮಂಗಳವಾರ ರಾತ್ರಿ ಅಪಘಾತ ನಡೆದಿದ್ದು, ಮೃತಪಟ್ಟವರನ್ನು ಬದಿಯಡ್ಕದ ಅಲಿ ಶಾನ್ (೨೬) ಎಂದು ಗುರುತಿಸಲಾಗಿದೆ.  ಗಾಯಗೊಂಡ ನಾಲ್ವರನ್ನು  ಕಾಸರಗೋಡು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಕ್ರೀದ್ ಹಬ್ಬದ ಹಿನ್ನಲೆಯಲ್ಲಿ ವಸ್ತ್ರ ಖರೀದಿಸಿ ಮರಳುತ್ತಿದ್ದಾಗ  ಅಪಘಾತ ನಡೆದಿದೆ. ಗಂಭೀರ ಗಾಯಗೊಂಡ ಅಲಿ  ಶಾನ್ ರನ್ನು   ಮಂಗಳೂರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ  ಇಂದು  ಬೆಳಿಗ್ಗೆ  ಮೃತಪಟ್ಟಿದ್ದಾರೆ.

ಬಕ್ರೀದ್ ಹಬ್ಬರ  ಸಡಗರದಲ್ಲಿದ್ದ ಕುಟುಂಬಕ್ಕೆ ದಾರುಣ ದುರಂತ ಶೋಕತಪ್ತವನ್ನಾಗಿಸಿದೆ. ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News