ಕುಂದಾಪುರ: ಬಾವಿಗೆ ಬಿದ್ದು ವೃದ್ಧೆ ಸಾವು
Update: 2018-08-22 14:34 GMT
ಕುಂದಾಪುರ, ಆ.22: ತೆರೆದ ಬಾವಿಯಿಂದ ನೀರು ತೆಗೆಯಲು ಬಗ್ಗಿದ ವೃದ್ಧೆ ಯೊಬ್ಬರು ಅಕಸ್ಮಿಕವಾಗಿ ಆಯತಪ್ಪಿ ಕಾಲು ಜಾರಿ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲೂಕಿನ ಹೆಮ್ಮಾಡಿ ಗ್ರಾಮದ ಕಟ್ಟು ಎಂಬಲ್ಲಿಂದ ವರದಿಯಾಗಿದೆ.
ಮೃತರನ್ನು ಅಮ್ಮಕ್ಕ ಪೂಜಾರ್ತಿ (73) ಎಂದು ಗುರುತಿಸಲಾಗಿದೆ. ಇವರು ಮಂಗಳವಾರ ಅಪರಾಹ್ನ 1:30ರ ಸುಮಾರಿಗೆ ಕಟ್ಟುವಿನ ಚಂದು ದೇವಾಡಿಗರ ಗದ್ದೆಯಲ್ಲಿರುವ ತೆರೆದ ಬಾವಿಯಿಂದ ನೀರನ್ನು ತೆಗೆಯಲು ಬಗ್ಗಿದಾಗ ಈ ದುರ್ಘಟನೆ ನಡೆದಿದೆ. ಈ ಬಗ್ಗೆ ಮೃತರ ಪುತ್ರ ರಾಜು ಪೂಜಾರಿ ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.