ಶಿರೂರು ಶ್ರೀ ಆರಾಧನೋತ್ಸವ ಮುಂದಕ್ಕೆ

Update: 2018-08-23 14:17 GMT

ಉಡುಪಿ, ಆ.23: ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥರ ಸಂಶಯಾಸ್ಪದ ಸಾವಿನ ಪೊಲೀಸ್ ತನಿಖೆ ಇನ್ನೂ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಹಿರಿಯಡ್ಕ ಸಮೀಪದ ಶಿರೂರು ಮೂಲಮಠದಲ್ಲಿ ಆ.  24 ಮತ್ತು 25ರಂದು ನಡೆಯಬೇಕಿದ್ದ ಶಿರೂರುಶ್ರೀಗಳ ಆರಾಧೋತ್ಸವವನ್ನು ಮುಂದೂಡಲಾಗಿದೆ.

ಶಿರೂರು ಮೂಲಮಠವನ್ನು ಇನ್ನೂ ಪೊಲೀಸರು ಬಿಟ್ಟುಕೊಡದ ಹಿನ್ನೆಲೆಯಲ್ಲಿ ಗುರು ಆರಾಧನೆಯ ಧಾರ್ಮಿಕ ವಿಧಿವಿಧಾನಗಳು, ಹೋಮಹವನಾದಿಗಳನ್ನು ನಡೆಸಲು ಕಾಲಾವಕಾಶವಿಲ್ಲದ ಕಾರಣ ಆರಾಧನೆಯನ್ನು ಮುಂದೂಡಲಾಗಿದೆ ಎಂದು ಶಿರೂರು ಮಠದ ದ್ವಂದ್ವ ಮಠದ ಸೋದೆ ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅದೇ ರೀತಿ ಶಿರೂರು ಮೂಲಮಠದಲ್ಲಿರುವ ಮುಖ್ಯಪ್ರಾಣ ದೇವರಿಗೆ ರಂಗಪೂಜೆಗೆ ಈ ಬಾರಿಯೂ ಸಾರ್ವಜನಿಕರಿಗೆ ಪ್ರವೇಶವಿರುವು ದಿಲ್ಲ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News